ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ವಿಜಯನಗರ ಜಿಲ್ಲೆ ಹಿರೇ ಹಡಗಲಿ ಹಾಲಸ್ವಾಮಿ ಮಠಕ್ಕೆ ಕರೆತಂದು ಮಠದಲ್ಲಿ ಮಹಜರು ನಡೆಸಲಾಯಿತು. ನಂತರ ಅವರನ್ನು ಸಿಸಿಬಿ ಪೊಲೀಸರು ವಾಪಸ್ ಕರೆದುಕೊಂಡು ಹೋಗಿದ್ದಾರೆ.
ಬುಧವಾರ ರಾತ್ರಿ 9.30ಕ್ಕೆ ಸ್ವಾಮೀಜಿ ಅವರನ್ನು ಮಠಕ್ಕೆ ಕರೆತಂದು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಮೊದಲು ಕುಟುಂಬ ಸದಸ್ಯರನ್ನು ಹೊರಗೆ ಕಳುಹಿಸಿ ಸ್ವಾಮೀಜಿ ವಿಚಾರಣೆ ನಡೆಸಲಾಯಿತು. ನಂತರ ಪೆಟ್ರೋಲ್ ಬಂಕ್, ಇತರೇ ಆಸ್ತಿ ಪಾಸ್ತಿಗಳ ಹೂಡಿಕೆ ಕುರಿತು ವಿಚಾರಣೆ ನಡೆಸಲಾಯಿತು. ನಂತರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಯಿತು. ಅಲ್ಲದೆ ಕಾರು ಚಾಲಕ ಲಿಂಗರಾಜ ಅವರನ್ನು ಜತೆಯಲ್ಲಿ ಕರೆತಂದು ವಿಚಾರಣೆ ನಡೆಸಲಾಯಿತು.