News Karnataka Kannada
Sunday, April 28 2024
ರಾಮನಗರ

ಸರ್ವ ಜನಾಂಗದ ಶಾಂತಿಯ ತೋಟ ಹೊತ್ತಿ ಉರಿಯುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

BJP is looting people's money in the name of development: HDK
Photo Credit :

ರಾಮನಗರ : ಸರ್ವ ಜನಾಂಗದ ಶಾಂತಿಯ ತೋಟ ಹೊತ್ತಿ ಉರಿಯುತ್ತಿದೆ. ಇಡೀ ಹಿಂದು- ಮುಸ್ಲಿಂ ಸಮುದಾಯದ ನಡುವೆ ಬಿರುಕು ಮೂಡಿಸುವ ಪ್ರಯತ್ನ ನಡೆದಿದೆ ಎಂದು ಜೆಡಿಎಸ್‌ ಶಾಸಕಾಂಗ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರ ಸಭೆ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಮುಸ್ಲಿಮರಿಗೆ ನಾನಾ ಬಹಿಷ್ಕಾರ ಆಯಿತು. ಇದೀಗ ಅವರು ಓಡಿಸುವ ಟ್ಯಾಕ್ಸಿ, ಆಟೊ ಏರಬಾರದು ಎಂದು ಹೊಸತಾಗಿ ಅಭಿಯಾನ ಶುರುವಾಗಿದೆ. ಬಿಜೆಪಿಯವರೇ ಕೆಲ ಅಂಗ ಪಕ್ಷಗಳ ಮೂಲಕ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಎಲ್ಲಿಗೆ ಮುಟ್ಟುತ್ತದೆಯೋ ಗೊತ್ತಿಲ್ಲ. ಆದರೆ, ಇದೇ ಅವರಿಗೆ ತಿರುಗುಬಾಣ ಆಗಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜನ ಬಾಗಿಲು ಮುಚ್ಚಲಿದ್ದಾರೆ’ ಎಂದರು.

‘ಪುರೋಹಿತರ ವಿಚಾರವಾಗಿ ನಾನು ಅಗೌರವವಾಗಿ ಮಾತನಾಡಿಲ್ಲ. ಆದರೆ, ಅವರು ತಮ್ಮ ಎಲ್ಲೆ ಮೀರಿ ಸಮಾಜದ ಸ್ವಾಸ್ಥ್ಯಕೆಡಿಸುವ ಮಾತು ಆಡಬಾರದು’ ಎಂದರು.

ಕಾಂಗ್ರೆಸ್ ಪಿತೂರಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಿತೂರಿಯಿಂದ ಮುಸ್ಲಿಮರು ಜೆಡಿಎಸ್‌ಗೆ ಹೆಚ್ಚು ಮತ ಹಾಕಲಿಲ್ಲ. ಇದರಿಂದ ನಾವು 38 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡೆವು. ಇಲ್ಲದಿದ್ದರೆ ಕನಿಷ್ಠ 70 ಸ್ಥಾನ‌ ಗೆಲ್ಲುತ್ತಿದ್ದೆವು ಎಂದು
ತಿಳಿಸಿದರು.

ಇದೇ 12ರ‌ಂದು ರಾಮನಗರದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಜಲಧಾರೆ ವಾಹನಗಳಿಗೆ ಚಾಲನೆ ನೀಡಲಾಗುವುದು. ಇದೇ 16ರಿಂದ ರಾಜ್ಯದಾದ್ಯಂತ ಜಲಧಾರೆ ಯಾತ್ರೆ ಆರಂಭಗೊಳ್ಳಲಿದೆ. ಮೇ 8ವರೆಗೆ 180 ತಾಲ್ಲೂಕುಗಳಲ್ಲಿ ಈ ಯಾತ್ರೆ ಸಂಚರಿಸಲಿದೆ ಎಂದು ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು