ರಾಮನಗರ

ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಸೇರಿದ್ದ ಮಹಿಳೆ ದುರಂತ ಅಂತ್ಯ

ರಾಮನಗರ : ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಸೇರಿದ್ದ ಮಹಿಳೆಯೊಬ್ಬಳು ಅದೇ ಊರಿನ ವ್ಯಕ್ತಿ ಜತೆ ದುರಂತ ಅಂತ್ಯ ಕಂಡ ಘಟನೆ ಮಾಗಡಿ ತಾಲೂಕಿನ ದಾಸೇಗೌಡನಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ.ಬ್ಯಾಲಕೇರಿ ಗ್ರಾಮದ ಶ್ರೀನಿವಾಸ್(35) ಮತ್ತು ಪುಷ್ಪಲತಾ(32) ಮೃತ ದುರ್ದೈವಿಗಳು.

ಬ್ಯಾಲಕೇರಿ ಗ್ರಾಮದ ಗೆಂಡಯ್ಯ ಎಂಬುವವನ‌ ಜತೆ 6 ವರ್ಷದ ಹಿಂದೆ ದಾಸೇಗೌಡನಪಾಳ್ಯ ಗ್ರಾಮದ ಪುಷ್ಪಲತಾಗೆ ಮದುವೆ ಆಗಿತ್ತು. ಶ್ರೀನಿವಾಸ್​ಗೂ ಬೇರೆಯವರ ಜತೆ ಮದುವೆ ಆಗಿ, ಒಂದು ಮಗು ಇದೆ. ಶ್ರೀನಿವಾಸ್​ ಪತ್ನಿ 2ನೇ ಮಗುವಿನ ಗರ್ಭಿಣಿಯಾಗಿದ್ದಾರೆ. ವಾರದ ಹಿಂದೆ ಗಂಡನೊಂದಿಗೆ ಜಗಳಮಾಡಿಕೊಂಡ ಪುಷ್ಪಲತಾ, ದಾಸೇಗೌಡನಪಾಳ್ಯದ ತವರು ಮನೆ ಸೇರಿಕೊಂಡಿದ್ದಳು.

ದಾಸೇಗೌಡನಪಾಳ್ಯ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿದ್ದ ಬ್ಯಾಲಕೇರಿಯ ಶ್ರೀನಿವಾಸ್​ಗೆ ಮದುವೆ ಆಗಿ ಪತ್ನಿ ಮಗು ಇದ್ದರೂ ಪುಷ್ಪಲತಾಳ ಮೇಲೆ ಪ್ರೀತಿ ಹುಟ್ಟಿತ್ತು. ಗಂಡ ಇದ್ದರೂ ಪುಷ್ಪಲತಾ, ಶ್ರೀನಿವಾಸ್​ನನ್ನು ಪ್ರೀತಿಸುತ್ತಿದ್ದಳು.ಇಬ್ಬರೂ ಒಟ್ಟಿಗೆ ವಾಸಿಸುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.

ಭಾನುವಾರ ಬೆಳಗ್ಗೆಯಿಂದ ಫೋನಿನಲ್ಲೇ ಮಾತಾಡುತ್ತಿದ್ದ ಪ್ರೇಮಿಗಳು, ಸಂಜೆ ಒಟ್ಟಿಗೆ ಭೇಟಿಯಾಗಲು ಗ್ರಾಮದ ಹೊರವಲಯಕ್ಕೆ ಹೋಗಿದ್ದರು. ಈ ವೇಳೆ ಮೊದಲು ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಪುಷ್ಪಾಲತಾಳ ಶವವನ್ನು ಕೆಳಗಿಸಿ ಬಳಿಕ ಶ್ರೀನಿವಾಸ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕುದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಶ್ರೀನಿವಾಸ್​ರ ಪತ್ನಿಗೆ ಗಂಡನ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಪರಸ್ತ್ರೀ ಜತೆಗೆ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡ ಎಂಬ ಮತ್ತೊಂದ ಕಹಿ ಸತ್ಯ ಆಕೆಯನ್ನ ಇನ್ನಷ್ಟು ಕುಗ್ಗಿಸಿದ್ದು, ಇದೆಂಥಾ ಕೆಲಸ ಮಾಡಿಬಿಟ್ಟಿರಿ? ಅಯ್ಯೋ ದುರ್ವಿಧಿಯೇ, ನನ್ನ ಮಗು ಅಪ್ಪ ಎಲ್ಲಿ ಅಂದ್ರೆ ಏನು ಹೇಳೋದು? ನನ್ನ ಹೊಟ್ಟೆಯಲ್ಲಿರುವ ಕಂದ ಹೊರ ಬಂದಾಗ ಏನು ಹೇಳಲಿ? ಗಂಡನ ಬದುಕಿನ ಹಳಿ ತಪ್ಪಿದ್ದೆಲ್ಲಿ? ಎಂದು ನೋವಿನಲ್ಲೇ ಮರಗುತ್ತಿದ್ದಾರೆ.

Gayathri SG

Recent Posts

ಗುಡ್‌ ನ್ಯೂಸ್:‌ ಶುಗರ್‌, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ

ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ…

4 mins ago

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

9 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

10 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

10 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

10 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

11 hours ago