ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಮುನ್ನವೇ ಇಂದು ಭಾರೀ ಬಂದೋಬಸ್ತ್ ಮಧ್ಯೆ ಬೃಹತ್ ಲಾರಿಯಲ್ಲಿ ಸುರಕ್ಷಿತವಾಗಿ ಇಟ್ಟು ಅಯೋಧ್ಯೆಗೆ ಪ್ರಭು ಶ್ರೀರಾಮ ಲಲ್ಲಾ ವಿಗ್ರಹವನ್ನು ತರಲಾಗಿದೆ.
ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಸ್ಥಳದಿಂದ ರಾಮಂದಿರ ನಿರ್ಮಾಣದ ಆವರಣಕ್ಕೆ ಮೆರವಣಿಗೆ ಮೂಲಕ ಸಾಗಿಸಲಾಗಿದೆ.
ನಾಳೆ ಬೆಳಗ್ಗೆ ರಾಮ ಮಂದಿರದ ಗರ್ಭಗುಡಿಗೆ ವಿಗ್ರಹ ತಲುಪಲಿದೆ. ಈಗಾಗಲೇ ಜನವರಿ 16ರಿಂದಲೇ ವಿಧಿವಿಧಾನ ಶುರುವಾಗಿದ್ದು, ನಾಳೆಯಿಂದ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಾರಂಭ ಆಗಲಿದೆ.