ದಾವಣಗೆರೆ: ಮಾದಕ ವಸ್ತು ಸೇವಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ದಾಳಿ ನಡೆಸಿ 7 ಜನರನ್ನು ಬಂಧಿಸಿರುವ ಇಲ್ಲಿನ ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಮ್ (ಸಿಇಎನ್) ಅಪರಾಧ ಠಾಣೆಯ ಪೊಲೀಸರು, ಆರೋಪಿಗಳಿಂದ ಮಾದಕ ವಸ್ತು, ಹುಲಿ ಉಗುರು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆಯ ಬಾಲಾಜಿ ನಗರದ ನಿವಾಸಿ ಅಶೋಕ್ ಕುಮಾರ್ ಎಸ್. (ಈತ ಮೂಲತಃ ತುಮಕೂರು ಜಿಲ್ಲೆಯ ಕರೆಯಾಗಲ ಚಿಕ್ಕೇನಹಳ್ಳಿಯವನು), ದಾವಣಗೆರೆಯ ಆರ್ಎಂಸಿ ಲಿಂಕ್ ರಸ್ತೆಯ ನಿವಾಸಿಯಾಗಿರುವ ರಾಜಸ್ಥಾನದ ರಮೇಶ್ಕುಮಾರ್ ಗಾಂಸಿ, ಎಂ.ಆರ್. ಲೋಕೇಶ, ವಿನೋಬ ನಗರದ ಕಾರ್ತಿಕ್, ನಿಜಲಿಂಗಪ್ಪ ಬಡಾವಣೆಯ ರಾಮ್ ರತನ್, ಬೆಂಗಳೂರಿನ ಬಸವೇಶ್ವರ ಬಡಾವಣೆಯ ನಿವಾಸಿ, ರಾಜಸ್ಥಾನದ ಸುನೀಲ್ಕುಮಾರ್ ಹಾಗೂ ಕೊಡಿಗೆಹಳ್ಳಿಯ ಅಶೋಕ್ಕುಮಾರ್ ಬಂಧಿತರು.