ಕೆಲಸಕ್ಕೆಂದು ಸೇರಿಕೊಂಡ ವ್ಯಕ್ತಿ ಮನೆಯ ಒಡೆವೆಗಳನ್ನು ಕದ್ದು ಪರಾರಿ

ಚನ್ನಗಿರಿ : ಕೆಲಸಕ್ಕೆಂದು ಸೇರಿ ಮನೆಯ ಒಡೆವೆಗಳನ್ನು ಕದ್ದುಕೊಂಡು ಪರಾರಿ ಆಗಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹ 6.60 ಲಕ್ಷ ಮೌಲ್ಯದ 132 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕೋಲಾರ ನಿವಾಸಿ ವಿಜಯ್‌ ಬಂಧಿತ ಆರೋಪಿ. ಚನ್ನಗಿರಿ ಕಣದಸಾಲು ನಿವಾಸಿ ಕೆ.ಎಚ್‌. ಶಿವಮೂರ್ತಿ ಅವರು ಚನ್ನಗಿರಿ ವಿ.ಆರ್. ಬಡಾವಣೆಯಲ್ಲಿ ಕುರಿ ಫಾರ್ಮ್‌ ಹೌಸ್‌ ಅನ್ನು ನಡೆಸುತ್ತಿದ್ದಾರೆ. ಅವರು ಯೂಟ್ಯೂಬ್‌ ಮೂಲಕ ಅದರ ಪ್ರಚಾರ ಮಾಡಿದ್ದರು. ಇದನ್ನು ನೋಡಿದ್ದ ವಿಜಯ್‌ ಕರೆ ಮಾಡಿದ್ದ. ಹೈನುಗಾರಿಕೆಯಲ್ಲಿ ಐದು ವರ್ಷದ ಅನುಭವ ಇದೆ. ಕೆಲಸಕ್ಕೆ ಬರುವುದಾಗಿ ತಿಳಿಸಿದ್ದ ಅದರಂತೆ ಅ.1ರಂದು ಕೆಲಸಕ್ಕೆ ಸೇರಿಕೊಂಡಿದ್ದ.

ಅ.7ರಂದು ಸಂಜೆ ಆರೋಪಿ ವಿಜಯ್‌ ಟಿ ಕುಡಿಯಲೆಂದು ಫಾರ್ಮ್‌ ಹೌಸ್‌ನಿಂದ ಮಾಲೀಕರ ಮನೆಗೆ ಬಂದಿದ್ದ. ಶಿವಮೂರ್ತಿ ಅವರ ಪತ್ನಿ ಟಿ ನೀಡಿದ್ದರು. ಬಳಿಕ ಒಣ ಹಾಕಿದ್ದ ಬಟ್ಟೆ ತರಲು ಎಂದು ಮನೆಯ ಮಹಡಿ ಮೇಲೆ ಹೋಗಿದ್ದರು. ಇದೇ ಹೊತ್ತಲ್ಲಿ ಬಿರುವಿನಲ್ಲಿದ್ದ ₹ 8.2 ಲಕ್ಷ ಮೌಲ್ಯದ ಚಿನ್ನಾಭರಣ, ₹ 20 ಸಾವಿರ ನಗದು ಕಳವು ಮಾಡಿಕೊಂಡು ಪರಾರಿ ಆಗಿದ್ದ. ಈ ಬಗ್ಗೆ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚನ್ನಗಿರಿ ಉಪ ವಿಭಾಗಾಧಿಕಾರಿ ಸಂತೋಷ ಕೆ.ಎಂ., ಇನ್‌ಸ್ಪೆಕ್ಟರ್‌ ಮಧು ಪಿ.ಬಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ತಂಡದಲ್ಲಿ ಪಿಎಸ್‌ಐ ಚಂದ್ರಶೇಖರ್‌, ಅಪರಾಧ ವಿಭಾಗದ ಸಿಬ್ಬಂದಿ ರುದ್ರೇಶ್‌, ರೇವಣಸಿದ್ದಪ್ಪ, ಪ್ರವೀಣ್‌ ಗೌಡ, ಮಂಜುನಾಥ ಪ್ರಸಾದ್‌, ರೇವಣ ಸಿದ್ದಪ್ಪ ಇದ್ದರು.

Gayathri SG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

4 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

4 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

4 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

6 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

6 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

7 hours ago