News Karnataka Kannada
Monday, April 29 2024
ಬೆಂಗಳೂರು

ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರಿಂದ ಸರ್ಕಾರದ ವಿರುದ್ಧ ಅಪಪ್ರಚಾರ: ಶಿವಕುಮಾರ್

BJP-sponsored contractors spreading misinformation against govt: Shivakumar
Photo Credit : News Kannada

ಬೆಂಗಳೂರು: ಗುತ್ತಿಗೆದಾರರು ಮತ್ತು ಕಾಂಗ್ರೆಸ್ ಸರ್ಕಾರದ ನಡುವಿನ ಕಚ್ಚಾಟಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಸಚಿವರು ಕಮಿಷನ್ ಕೇಳಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮತ್ತಿತರರು ಸ್ಪಷ್ಟಪಡಿಸಿದ್ದಾರೆ ಎಂದರು.

ನಾನು 33 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ, ನನ್ನ ಜವಾಬ್ದಾರಿ ನನಗೆ ತಿಳಿದಿದೆ, ಬಿಜೆಪಿ ನಾಯಕರ ಅನೇಕ ಹಗರಣ ತನಿಖೆಗೆ ಆದೇಶಿಸಲಾಗಿದೆ. ಅವರ ಕಾಲದಲ್ಲಿ ಏನೆಲ್ಲಾ ಆಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಬುದ್ದಿವಂತರಂತೆ ವರ್ತಿಸಿದರೆ, ಅದಕ್ಕಿಂತ ಬುದ್ದಿವಂತಿಕೆ ನಮ್ಮಲ್ಲಿದೆ ಎಂದರು. ಬಿಜೆಪಿಯವರು ಬಿಲ್‌ಗಳನ್ನು ಕ್ಲಿಯರ್ ಮಾಡಬೇಕಿತ್ತು. ಹಣ ಬಿಡುಗಡೆ ಮಾಡುವ ಎಲ್ಲಾ ಅಧಿಕಾರ ಅವರಿಗಿತ್ತು, ಯಾಕೆ ಮಾಡಲಿಲ್ಲ? ಒಂದೇ ಒಂದು ಕಾಮಗಾರಿಗೂ ನಾನು ಒಪ್ಪಿಗೆ ನೀಡಿಲ್ಲ ಹೀಗಾಗಿ ಕಿಕ್‌ಬ್ಯಾಕ್ ಕೇಳುವ ಪ್ರಶ್ನೆಯಲ್ಲಿ ಎಂದರು.

ಗುತ್ತಿಗೆದಾರರ ಈ ಎಲ್ಲ ನಡವಳಿಕೆ ಹಿಂದೆ ಬಿಜೆಪಿ ಮುಖಂಡರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಗೋಪಾಲಯ್ಯ ಮತ್ತು ಆರ್.ಅಶೋಕ ಇದ್ದಾರೆ. ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು. “ನಮ್ಮ ಐದು ಗ್ಯಾರಂಟಿಗಳನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ, ಅಂತಹ ಯೋಜನೆಗಳನ್ನು ಏಕೆ ನೀಡಲು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು