News Karnataka Kannada
Monday, April 29 2024
ಬೆಂಗಳೂರು ನಗರ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

State-level essay competition for school and college students on independence day
Photo Credit : Pexels

ಬೆಂಗಳೂರು: ಮೈ ಭಾರತ್‌, ದಿಶಾ ಭಾರತ್‌ ಹಾಗೂ ಈಸ್ಟ್-‌ ವೆಸ್ಟ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಗಳ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ” ಸ್ವರಾಜ್ಯ ಆಂದೋಲನ ಹಾಗೂ ರಾಷ್ಟ್ರಭಾವ ಜಾಗರಣ” ವಿಚಾರದ ಕುರಿತಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕನ್ನಡ ಮತ್ತು ಇಂಗ್ಲೀಷ್‌ ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

ಎರಡು ವಿಭಾಗದಲ್ಲಿ ಸ್ಪರ್ಧೆಯು ನಡೆಯಲಿದೆ. ಮೊದಲ ವಿಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು( 9-10ನೇ ತರಗತಿ ಹಾಗೂ ಪ್ರಥಮ- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು) ಭಾಗವಹಿಸಬಹುದು. ಎರಡನೇ ವಿಭಾಗದಲ್ಲಿ ಕಾಳೇಜು ವಿದ್ಯಾರ್ಥಿಗಳು( ಪದವಿ\ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು) ಪಾಲ್ಗೊಳ್ಳಬಹುದಾಗಿದೆ.

ಪ್ರತಿ ವಿಭಾಗಕ್ಕೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7,500 ತೃತೀಯ ಬಹುಮಾನ 5 ಸಾವಿರ ಹಾಗೂ ತಲಾ ಸಾವಿರದಂತೆ 10 ವಿಜೇತರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಜೊತೆಗೆ ಎಲ್ಲಾ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.

ʼಸ್ವರಾಜ್ಯ ಆಂದೋಲನ ಹಾಗೂ ರಾಷ್ಟ್ರಭಾವ ಜಾಗರಣʼ ವಿಚಾರದ ಕುರಿತಂತೆ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಕಂಡ ವಿಳಾಸಕ್ಕೆ 2022ರ ಆಗಸ್ಟ್‌ 15ರ ಒಳಗೆ ಕಳುಹಿಸಿಕೊಡಲು ಕೋರಲಾಗಿದೆ. ಸ್ವ ವಿವರದೊಂದಿಗೆ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್‌ ಪ್ರತಿಯನ್ನು ಕಡ್ಡಾಯವಾಗಿ ಜೊತೆಗಿರಿಸಲು ಸೂಚಿಸಲಾಗಿದೆ.

ಪ್ರಬಂಧ ಕಳುಹಿಸಬೇಕಾದ ವಿಳಾಸ:
ಈಸ್ಟ್‌ ವೆಸ್ಟ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ನಂ.63, ಬಿಇಎಲ್‌ (BEL) ಲೇಔಟ್‌ ನಮೀಪ, ಮಾಗಡಿ ಮುಖ್ಯರಸ್ತೆ ಎದುರು, ವಿಶ್ವನೀಧಮ್(‌VISHWANEEDHAM) ಪೋಸ್ಟ್‌, ಅಂಜನನಗರ (ANJANANAGAR) , ಬೆಂಗಳೂರು- 560091.

ಮಾಹಿತಿಗೆ: 9483150527, 9945201546, 9945426967 ಸಂಪರ್ಕಿಸಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು