News Karnataka Kannada
Wednesday, May 01 2024
ಬೆಂಗಳೂರು ನಗರ

ಅರಸೀಕೆರೆ: ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ- ಶಾಸಕ ಕೆ.ಎಂ ಶಿವಲಿಂಗೇಗೌಡ

Arsikere
Photo Credit : News Kannada

ಅರಸೀಕೆರೆ: ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ ರಾಜಕೀಯವಾಗಿ ನೀವು ನೀಡುವ ಶಕ್ತಿಯನ್ನು ನಿಮ್ಮ ಮನೆಯ ಮಗನಂತೆ ನಿಮ್ಮ ಸೇವೆಗೆ ಮುಡುಪಾಗಿಡುವೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

ಗಂಡಸಿ ಹೋಬಳಿ ಬಾಗೇಶಪುರ ಹಾಗೂ ರಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರಿಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು 15 ಮತಗಳ ಅಂತರದಿಂದ ಪರಾಜಿತನಾಗಿ ರಾಜಕೀಯವಾಗಿ ಮುಂದೇನು ಎನ್ನುವಂತ ಸಂದರ್ಭದಲ್ಲಿ ನನ್ನನ್ನು ಅರಸಿ ಆಶೀರ್ವದಿಸಿದ ಕ್ಷೇತ್ರದ ಕ್ಷೇತ್ರ ಜನತೆ ಹಾಗೂ ನನ್ನ ನಡುವೆ ರಾಜಕಾರಣಿಯಾಗು ಮತದಾರ ಎಂಬ ಸಂಬಂಧಕ್ಕಿಂತ ಪ್ರತಿಯೊಬ್ಬರ ಮನೆಯ ಬಂದು ನಾನು ಎನ್ನುವಷ್ಟು ಆತ್ಮೀಯತೆ ನಮ್ಮ ನಿಮ್ಮ ಮಧ್ಯೆ ಇದೆ ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಬಹಿರಂಗ ಸಭೆಯಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಸಂದರ್ಭದಲ್ಲಿ ನಾನು ಕ್ಷೇತ್ರದ ಜನತೆಗೆ ನೀಡಿದ ಆಶ್ವಾಸನೆಯಂತೆ ನಗರ ಸೇರಿದಂತೆ ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಮುಂದಿನ ಐದಾರು ದಶಕಗಳ ಕಾಲ ಕಾಡದ ರೀತಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಹೋಬಳಿಗೊಂದು ನಿರ್ಮಾಣವಾಗಿರುವ ವಸತಿ ಶಾಲೆಗಳಲ್ಲಿ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ನಗರಪ್ರದೇಶದಂತೆ ಗ್ರಾಮೀಣ ಭಾಗದ ಜನತೆಗೂ ಸಂಚರಿಸಲು ರಸ್ತೆ ವಿದ್ಯುತ್ ದೀಪ ಅಳವಡಿಕೆ ಚರಂಡಿ ನಿರ್ಮಾಣ ಹೀಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಅರಸೀಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುವಲ್ಲಿ ನೀವು ನೀಡಿದ ರಾಜಕೀಯ ಶಕ್ತಿಯಿಂದ ಸಾಧ್ಯವಾಗಿದೆ ಎಂದರು.

ಇಷ್ಟೆಲ್ಲ ಅಭಿವೃದ್ಧಿ ಕೆಲಸ ಕಾರ್ಯಗಳಾಗಿದ್ದರು ನನಗೆ ಸಮಾಧಾನವಾಗಿಲ್ಲ ಬಯಲು ಸೀಮೆಯಾ ನನ್ನ ಕ್ಷೇತ್ರದ ಕೃಷಿ ಭೂಮಿಗೆ ನದಿ ನೀರು ಹರಿಸುವ ತನಕ ನನಗೆ ಸಮಾಧಾನವಿಲ್ಲ ಹಾಗಾಗಿ ಮತ್ತೊಂದು ರೀತಿಯ ಹೋರಾಟಕ್ಕೆ ಸಿದ್ದನಾಗಿದ್ದು ಇದಕ್ಕೂ ನಿಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದದ ದೊರೆತಿದ್ದೆ ಆದರೆ ನದಿ ನೀರನ್ನ ಕ್ಷೇತ್ರದ ಕೃಷಿ ಭೂಮಿಗೆ ಪೂರೈಸಿಯೆ ತಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹುಚ್ಚೇಗೌಡ ಮಾತನಾಡಿ ಅಭಿವೃದ್ಧಿ ಎನ್ನುವುದು ನಗರದ ಜನತೆಗೆ ಮಾತ್ರ ಸೀಮಿತ ಎಂಬಂತಾಗಿತ್ತು ಆದರೆ ಶಿವಲಿಂಗೇಗೌಡರು ಕ್ಷೇತ್ರದ ಎಂಎಲ್ಎ ಆದ ಬಳಿಕ ನಗರ ಪ್ರದೇಶದಂತೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದರಿಂದ ಗ್ರಾಮೀಣ ಭಾಗದ ಜನತೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಜತೆಗೆ ತಮ್ಮ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಕಾಣುತ್ತಿದ್ದಾರೆ ಶಾಸಕರ ಈ ರೀತಿಯ ಜನಪರ ನಿಲುವು ಹಾಗೂ ಹೋರಾಟ ನಿಜಕ್ಕೂ ಯುವರಾಜಕಾರಣಿಗಳಿಗೆ ಆದರ್ಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಲಾಯಿತು ಸಮಾರಂಭದಲ್ಲಿ ಮುಖಂಡರಾದ ಅಡವಿ ಸ್ವಾಮಿ,ತಾಪಂ ಮಾಜಿ ಅಧ್ಯಕ್ಷ ಶೋಭಾ ಶಿವಣ್ಣ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಜಯರಾಂ, ಸದಸ್ಯ,ಚಗಚ್ಗೆರೆ ರಾಮಚಂದ್ರು, ಬಾಗೇಪುರ ಗ್ರಾಪಂ ಅಧ್ಯಕ್ಷೆ ಶಿವಮ್ಮ ಗೋಪಾಲಗೌಡ,ರಂಗಪುರ ಗ್ರಾಪಂ ಅಧ್ಯಕ್ಷೆ ಕಮಲಮ್ಮ ಬಸವರಾಜ್, ಗ್ರಾಮದ ಮುಖಂಡ ಸ್ವಾಮಿ,ಮತ್ತಿತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು