ಬೆಂಗಳೂರು: ಮಹಾಶಿವರಾತ್ರಿಯಂದು ದೂರದ ಊರುಗಳಿಗೆ ಪ್ರಯಾಣಿಸುವ ಬೆಂಗಳೂರಿನ ಜನರಿಗೆ ಕೆಎಸ್ಆರ್ಟಿಸಿ ಹೆಚ್ಚುವರಿಯಾಗಿ 1,500 ಬಸ್ಗಳ ವ್ಯವಸ್ಥೆ ಕಲ್ಪಿಸಿದೆ.
ಮಾ. 8 ಶುಕ್ರವಾರ ದಂದು ಶಿವರಾತ್ರಿ ಹಬ್ಬ ಬಂದಿದ್ದರಿಂದ ಸರ್ಕಾರ ರಜೆ ಇರುತ್ತದೆ. 9 ಮತ್ತು 10 ಶನಿವಾರ, ಭಾನುವಾರ ಬಂದಿವೆ. ಹೀಗಾಗಿ ಶನಿವಾರ ಮಾತ್ರ ರಜೆ ತೆಗೆದುಕೊಂಡರೆ ಒಟ್ಟು 3 ದಿನ ರಜೆ ಸಿಕ್ಕಂತೆ ಆಗುತ್ತದೆ. ಈ ವೇಳೆ ಬಸ್ಗಳ ಕೊರತೆ ಕಾಡುವುದಲ್ಲದೇ ದುಬಾರಿ ಹಣ ಕೊಟ್ಟು ಪ್ರಯಾಣಿಸಬೇಕಾಗುತ್ತಿದೆ. ಹೀಗಾಗಿ ಇದನ್ನು ಮನಗಂಡಿರುವ ಸರ್ಕಾರವು ಕೆಎಸ್ಆರ್ಟಿಸಿ ಇಲಾಖೆಯಿಂದ ಈಗಿರುವ ಬಸ್ಗಳಿಗಿಂತ ಹೆಚ್ಚುವರಿಯಾಗಿ 1,500 ಬಸ್ಗಳ ವ್ಯವಸ್ಥೆ ಮಾಡುತ್ತಿದೆ. ಮಾರ್ಚ್ 7 ರಿಂದ ಮಾರ್ಚ್ 10ರವರೆಗೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಇರುತ್ತದೆ. ಅದರಂತೆ ಪ್ರಯಾಣಿಕರು ವಪಸ್ ಬರುವಾಗಲೂ ಮಾ.10 ರಿಂದ 11ರವರೆಗೆ ಕೆಎಸ್ಆರ್ಟಿಸಿಯ ಹೆಚ್ಚುವರಿ ವ್ಯವಸ್ಥೆ ಇರುತ್ತದೆ. ರಾಜ್ಯದಲ್ಲಿ ಮಾತ್ರ ಅಲ್ಲದೇ ಬೇರೆ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಈ ವ್ಯವಸ್ಥೆ ಲಭ್ಯ ಇರಲಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣ (KBS); ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ವಿವಿಧ ಭಾಗಗಳಿಗೆ ವಿಶೇಷ ಬಸ್ ಕಾರ್ಯಚರಣೆ ಇರುತ್ತದೆ.
ಮೈಸೂರು ರಸ್ತೆ ಬಸ್ ನಿಲ್ದಾಣ; ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗಗಳಿಗೆ ಬಸ್ಗಳು ಇರುತ್ತಾವೆ.
ಶಾಂತಿನಗರ ಬಸ್ ನಿಲ್ದಾಣ; ತಮಿಳುನಾಡು, ಕೇರಳ ರಾಜ್ಯಕ್ಕೆ ಸೇರಿ ವಿವಿಧ ಸ್ಥಳಗಳಿಗೆ ಬಸ್ ಕಾರ್ಯಚರಣೆ ಇರುತ್ತದೆ.
ಬಸ್ ಟಿಕೆಟ್ಗಳನ್ನು ಮುಂಗಡವಾಗಿ ಬುಕಿಂಗ್ ಮಾಡಿಕೊಂಡು ಆಸನಗಳನ್ನ ಕಾಯ್ದಿರಿಸಲು ಅವಕಾಶವಿದೆ. ಮುಂಗಡ ಟಿಕೆಟ್ಗಾಗಿ ಮೇಲೆ ಕೊಟ್ಟಿರುವ ಪಿಕ್ಆಪ್ ಪಾಯಿಂಟ್ ಹೆಸರು ಗಮನಿಸಲು ಸೂಚನೆ ನೀಡಲಾಗಿದೆ. ಇ-ಟಿಕೆಟ್ ಬುಕಿಂಗ್ ಅನ್ನು www.ksrtc.karnataka.gov.in ವೆಬ್ ಮೂಲಕ ಮಾಡಬಹುದು. 4 ಅಥವಾ 5 ಪ್ರಯಾಣಿಕರು ಅಡ್ವಾನ್ಸ್ ಟಿಕೆಟ್ ಬುಕ್ ಮಾಡಿದರೆ ಶೇ.5ರಷ್ಟು ರಿಯಾಯಿತಿ ಸಿಗುತ್ತದೆ. ಒಂದು ವೇಳೆ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಬುಕ್ ಮಾಡಿದರೆ ಶೇ.10ರಷ್ಟು ರಿಯಾಯಿತಿ ಸಿಗುತ್ತದೆ. ಹಬ್ಬಗಳ ಸಮಯದಲ್ಲಿ ಕೆಎಸ್ಆರ್ಟಿಸಿಯ ಇಂತಹ ವಿಶೇಷ ಆಫರ್ ಗಳು ಪ್ರಯಾಣಿಕರಿಗೆ ಭಾರೀ ಸಹಾಯಕವಾಗಲಿದೆ.