News Karnataka Kannada
Monday, April 29 2024
ಬೆಂಗಳೂರು ನಗರ

ಶಿವರಾತ್ರಿ ಹಬ್ಬಕ್ಕೆ ಬೆಂಗಳೂರಿನಿಂದ ಊರಿಗೆ ಹೋಗೋರಿಗೆ ಕೆಎಸ್​ಆರ್​ಟಿಸಿಯಿಂದ ಗುಡ್ ನ್ಯೂಸ್

ಕೆಎಸ್ಆರ್​​ಟಿಸಿ ಬಸ್​ನಲ್ಲಿ ಮಹಿಳೆಯೋರ್ವರು ರಾಯಚೂರು ಟು ಬೆಂಗಳೂರಿಗೆ ತಡರಾತ್ರಿ ಪ್ರಯಾಣಿಸುತ್ತಿದ್ದ ವೇಳೆ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
Photo Credit : Twitter

ಬೆಂಗಳೂರು: ಮಹಾಶಿವರಾತ್ರಿಯಂದು ದೂರದ ಊರುಗಳಿಗೆ ಪ್ರಯಾಣಿಸುವ ಬೆಂಗಳೂರಿನ ಜನರಿಗೆ ಕೆಎಸ್​ಆರ್​ಟಿಸಿ ಹೆಚ್ಚುವರಿಯಾಗಿ 1,500 ಬಸ್​ಗಳ ವ್ಯವಸ್ಥೆ ಕಲ್ಪಿಸಿದೆ.

ಮಾ. ​ 8 ಶುಕ್ರವಾರ ದಂದು ಶಿವರಾತ್ರಿ ಹಬ್ಬ ಬಂದಿದ್ದರಿಂದ ಸರ್ಕಾರ ರಜೆ ಇರುತ್ತದೆ. 9 ಮತ್ತು 10 ಶನಿವಾರ, ಭಾನುವಾರ ಬಂದಿವೆ. ಹೀಗಾಗಿ ಶನಿವಾರ ಮಾತ್ರ ರಜೆ ತೆಗೆದುಕೊಂಡರೆ ಒಟ್ಟು 3 ದಿನ ರಜೆ ಸಿಕ್ಕಂತೆ ಆಗುತ್ತದೆ. ಈ ವೇಳೆ ಬಸ್​ಗಳ ಕೊರತೆ ಕಾಡುವುದಲ್ಲದೇ ದುಬಾರಿ ಹಣ ಕೊಟ್ಟು ಪ್ರಯಾಣಿಸಬೇಕಾಗುತ್ತಿದೆ. ಹೀಗಾಗಿ ಇದನ್ನು ಮನಗಂಡಿರುವ ಸರ್ಕಾರವು ಕೆಎಸ್​ಆರ್​ಟಿಸಿ ಇಲಾಖೆಯಿಂದ ಈಗಿರುವ ಬಸ್​ಗಳಿಗಿಂತ ಹೆಚ್ಚುವರಿಯಾಗಿ 1,500 ಬಸ್​ಗಳ ವ್ಯವಸ್ಥೆ ಮಾಡುತ್ತಿದೆ. ಮಾರ್ಚ್​ 7 ರಿಂದ ಮಾರ್ಚ್​ 10ರವರೆಗೆ ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಇರುತ್ತದೆ. ಅದರಂತೆ ಪ್ರಯಾಣಿಕರು ವಪಸ್ ಬರುವಾಗಲೂ ಮಾ.10 ರಿಂದ 11ರವರೆಗೆ ಕೆಎಸ್​ಆರ್​ಟಿಸಿಯ ಹೆಚ್ಚುವರಿ ವ್ಯವಸ್ಥೆ ಇರುತ್ತದೆ. ರಾಜ್ಯದಲ್ಲಿ ಮಾತ್ರ ಅಲ್ಲದೇ ಬೇರೆ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಈ ವ್ಯವಸ್ಥೆ ಲಭ್ಯ ಇರಲಿದೆ.

ಮೆಜೆಸ್ಟಿಕ್ ಬಸ್ ನಿಲ್ದಾಣ (KBS); ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ತಿರುಪತಿ, ವಿಜಯವಾಡ, ಹೈದರಾಬಾದ್ ಸೇರಿದಂತೆ ವಿವಿಧ ಭಾಗಗಳಿಗೆ ವಿಶೇಷ ಬಸ್ ಕಾರ್ಯಚರಣೆ ಇರುತ್ತದೆ.
ಮೈಸೂರು ರಸ್ತೆ ಬಸ್ ನಿಲ್ದಾಣ; ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗಗಳಿಗೆ ಬಸ್​ಗಳು ಇರುತ್ತಾವೆ.
ಶಾಂತಿನಗರ ಬಸ್ ನಿಲ್ದಾಣ; ತಮಿಳುನಾಡು, ಕೇರಳ ರಾಜ್ಯಕ್ಕೆ ಸೇರಿ ವಿವಿಧ ಸ್ಥಳಗಳಿಗೆ ಬಸ್ ಕಾರ್ಯಚರಣೆ ಇರುತ್ತದೆ.
ಬಸ್​ ಟಿಕೆಟ್​ಗಳನ್ನು ಮುಂಗಡವಾಗಿ ಬುಕಿಂಗ್ ಮಾಡಿಕೊಂಡು ಆಸನಗಳನ್ನ ಕಾಯ್ದಿರಿಸಲು ಅವಕಾಶವಿದೆ. ಮುಂಗಡ ಟಿಕೆಟ್​ಗಾಗಿ ಮೇಲೆ ಕೊಟ್ಟಿರುವ ಪಿಕ್ಆಪ್ ಪಾಯಿಂಟ್ ಹೆಸರು ಗಮನಿಸಲು ಸೂಚನೆ ನೀಡಲಾಗಿದೆ. ಇ-ಟಿಕೆಟ್ ಬುಕಿಂಗ್ ಅನ್ನು www.ksrtc.karnataka.gov.in ವೆಬ್ ಮೂಲಕ ಮಾಡಬಹುದು. 4 ಅಥವಾ 5 ಪ್ರಯಾಣಿಕರು ಅಡ್ವಾನ್ಸ್ ಟಿಕೆಟ್ ಬುಕ್ ಮಾಡಿದರೆ ಶೇ.5ರಷ್ಟು ರಿಯಾಯಿತಿ ಸಿಗುತ್ತದೆ. ಒಂದು ವೇಳೆ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಬುಕ್ ಮಾಡಿದರೆ ಶೇ.10ರಷ್ಟು ರಿಯಾಯಿತಿ ಸಿಗುತ್ತದೆ. ಹಬ್ಬಗಳ ಸಮಯದಲ್ಲಿ ಕೆಎಸ್​ಆರ್​ಟಿಸಿಯ ಇಂತಹ ವಿಶೇಷ ಆಫರ್ ಗಳು ಪ್ರಯಾಣಿಕರಿಗೆ ಭಾರೀ ಸಹಾಯಕವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು