ನವದೆಹಲಿ: ಇನ್ ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಭಾರತದಲ್ಲಿ ಕೆಲಸದ ಅವಧಿಯ ಕುರಿತು ಆಡಿರುವ ಮಾತೊಂದು ಇದೀಗ ಚರ್ಚೆಗೀಡಾಗಿದೆ. ನಾರಾಯಣ ಮೂರ್ತಿ ಅವರು ಮಾಜಿ ಇನ್ಫೊಸಿಸ್ ಸಿಇಒ ಮೋಹನ್ ದಾಸ್ ಪೈ ಅವರೊಂದಿಗೆ 3 ಒನ್ 4 ಕ್ಯಾಪಿಟಲ್ ನ ಪಾಡ್ಕಾಸ್ಟ್ ದಿ ರೆಕಾರ್ಡ್ ನ ಮೊದಲ ಸಂಚಿಕೆಯಲ್ಲಿ ಮಾತನಾಡುವ ವೇಳೆ ಭಾರತೀಯರ ಕೆಲಸದ ಉತ್ಪನ್ನಶೀಲತೆ ಬಹಳ ಕಡಿಮೆ ಇದೆ.
ಕಳೆದ ಎರಡು ಮೂರು ದಶಕಗಳಲ್ಲಿ ಭಾರೀ ಪ್ರಗತಿ ಕಂಡಿರುವ ಆರ್ಥಿಕತೆಗಳೊಂದಿಗೆ ಭಾರತ ಪೈಪೋಟಿ ನಡೆಸಬೇಕಾದರೆ ದೇಶದ ಯುವಕರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಅದೇ ರೀತಿ ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜರ್ಮನಿ ಮತ್ತು ಜಪಾನ್ನ ಜನರು ಹೆಚ್ಚುವರಿ ಸಮಯ ಕೆಲಸ ಮಾಡುತ್ತಿದ್ದುದನ್ನು ಉದಾಹರಿಸಿದ್ದಾರೆ.
ಅದೇ ರೀತಿ ಸರ್ಕಾರದ ಬಗ್ಗೆಯೂ ಮಾತನಾಡಿದ್ದು, ‘ಪ್ರತಿಯೊಂದು ಸರ್ಕಾರವೂ ಜನರ ಸಂಸ್ಕೃತಿಯಂತೆಯೇ ಇರುತ್ತದೆ. ನಮ್ಮ ಸಂಸ್ಕೃತಿ ಬದಲಾಗಬೇಕು. ಹೆಚ್ಚು ಶಿಸ್ತು, ಹೆಚ್ಚು ಶ್ರಮದ ಗುಣವನ್ನು ಜನರು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.