ಬೆಂಗಳೂರು: ಪ್ರಕೃತಿಯ ಆಭರಣಗಳಾದ ಕಾಡು ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಶಪಥ ಮಾಡಬೇಕಿದೆ

ಬೆಂಗಳೂರುನವೆಂಬರ್ 10,2022: ಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಬದುಕನ್ನು ಚಿತ್ರಿಸುವ ಅತ್ಯುತ್ತಮ ಚಿತ್ರಗಳನ್ನು ಸೂರ್ಯಪ್ರಕಾಶ್  ಕ್ಲಿಕ್ಕಿಸಿದ್ದಾರೆ. ನಿವೃತ್ತಿ ನಂತರದ ಒಂಭತ್ತು ವರ್ಷಗಳ ಅವರ ಸಾಧನೆ ಪ್ರಶಂಸಾರ್ಹ. ಈ ಪ್ರದರ್ಶನಕ್ಕೆ ಬಂದು ಚಿತ್ರಗಳನ್ನು ವೀಕ್ಷಿಸಿದವರಲ್ಲಿ ಕನಿಷ್ಠ ಶೇ 5ರಷ್ಟು ಜನರಾದರೂ ಪ್ರಕೃತಿಯ ಆಭರಣಗಳಾದ ಕಾಡು ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಶಪಥ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಸವಾಲುಗಳನ್ನೇ ಜೀವಿಸುವ ಛಾಯಾಗ್ರಾಹಕನ ಪ್ರಯತ್ನ ಸಫಲವಾದಂತೆ ಆಗುತ್ತದೆ ಎಂದು ಎಂ .ಎನ್  ಜಯಕುಮಾರ್ ಅವರು ತಿಳಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೂರ್ಯ ಪ್ರಕಾಶ್ ಕೆ.ಎಸ್ ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನು ನವೆಂಬರ್ 10 ರಿಂದ 13ರವರೆಗೆ ಆಯೋಜಿಸಲಾಗಿದ್ದುಮೂರು ದಿನಗಳವರೆಗೆ ನಡೆಯಲಿರುವ ಈ “ವೈಲ್ಡ್ ಮೂಮೆಂಟ್ಸ್” ಪ್ರದರ್ಶನದಲ್ಲಿ ಎಂ .ಎನ್  ಜಯಕುಮಾರ್ (ಐಎಫ್ ಎಸ್ (ಆರ್)ಎಫ್ ಆರ್ ಪಿಎಸ್ಎಂಎಫ್ ಐಎಪಿ ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಕರ್ನಾಟಕ ಸರ್ಕಾರ) ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಡಾ. ಅಜಿತ್ ಕೆ ಹುಲ್ಗೋಲ್ (ಎಂಬಿಬಿಎಸ್ಎಂಎಸ್ಎಂಎನ್ ಎ ಎಂಎಸ್)ಬಿ ಶ್ರೀನಿವಾಸ್ (ಎಫ್ ಆರ್ ಪಿಎಸ್ಎಂಎಫ್ ಐಎಪಿಎಚ್ ಒ ಎನ್. ಎಫ್ ಐಸಿಎಸ್ಎಚ್ ಒಎನ್. ಎಫ್ ಎಪಿಎಎಚ್ ಒಎನ್. ಎಫ್ ಐಪಿ) ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸೂರ್ಯಪ್ರಕಾಶ್ ಅವರ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದ ಎಂ .ಎನ್  ಜಯಕುಮಾರ್ ಅವರು, ʼ2022ರ ವರದಿಯ ಪ್ರಕಾರ ಕಳೆದ 50 ವರ್ಷಗಳಲ್ಲಿ ಜಗತ್ತಿನ ಶೇ 59ರಷ್ಟು ಪ್ರಾಣಿಸಂಕುಲ ನಾಶವಾಗಿದೆ. ಇದು ಹೀಗೇ ಮುಂದುವರಿದರೆ ಮನುಕುಲ ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.ʼಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಬದುಕನ್ನು ಚಿತ್ರಿಸುವ ಅತ್ಯುತ್ತಮ ಚಿತ್ರಗಳನ್ನು ಸೂರ್ಯಕುಮಾರ್‌ ಕ್ಲಿಕ್ಕಿಸಿದ್ದಾರೆ. ನಿವೃತ್ತಿ ನಂತರದ ಒಂಭತ್ತು ವರ್ಷಗಳ ಅವರ ಸಾಧನೆ ಪ್ರಶಂಸಾರ್ಹ. ಈ ಪ್ರದರ್ಶನಕ್ಕೆ ಬಂದು ಚಿತ್ರಗಳನ್ನು ವೀಕ್ಷಿಸಿದವರಲ್ಲಿ ಕನಿಷ್ಠ ಶೇ 5ರಷ್ಟು ಜನರಾದರೂ ಪ್ರಕೃತಿಯ ಆಭರಣಗಳಾದ ಕಾಡು ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಶಪಥ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಸವಾಲುಗಳನ್ನೇ ಜೀವಿಸುವ ಛಾಯಾಗ್ರಾಹಕನ ಪ್ರಯತ್ನ ಸಫಲವಾದಂತೆ ಆಗುತ್ತದೆ. ಛಾಯಾಗ್ರಹಣ ಸುಲಭವಲ್ಲ. ಕ್ಯಾಮೆರಾ ಹಿಡಿದುಅಂದಿನ ವಾತಾವರಣಕ್ಕೆಛಾಯಾಚಿತ್ರಕ್ಕೆ ಸಂಬಂಧ ಪಟ್ಟಂತೆ ಅಪ್ಪರ್ಚರ್‌ ಹೊಂದಿಸಿಕೊಳ್ಳುವುದುರ ಜೊತೆಗೆ ನೂರಾರು ಸ್ಥಳಗಳಿಗೆ ಓಡಾಡಬೇಕಾಗುತ್ತದೆ. ಹುಲಿಯ ಚಿತ್ರ ಬೇಕು ಎಂದರೆ ಹುಲಿ ಮೀಸಲು ಪ್ರದೇಶಗಳಿಗೇ ಹೋಗಬೇಕು. ಅಲ್ಲಿ ಹುಲಿ ಕಣ್ಣಿಗೆ ಬೀಳಬೇಕು. ಒಂದೊಮ್ಮೆ ಹುಲಿ 100 ಸಲ ಕಣ್ಣಿಗೆ ಬಿತ್ತು ಅಂದುಕೊಳ್ಳಿ. ಚಿತ್ರ ಕ್ಲಿಕ್ಕಿಸಲು ಅವಕಾಶ ಸಿಗುವುದು 15ರಿಂದ 20 ಬಾರಿ. ಅದರಲ್ಲಿ ಪ್ರಕಟಣೆಗೆ ಯೋಗ್ಯವಾಗುವಂಥ ಚಿತ್ರ ಸಿಗುವುದು 3 ಅಥವಾ 4 ಮಾತ್ರ. ಹೀಗಾಗಿ ತಾಳ್ಮೆ ಇದ್ದು ಕಠಿಣ ಪರಿಶ್ರಮ ಪಟ್ಟವರಿಗೆ ಮಾತ್ರ ಸುಂದರವಾದಆಕರ್ಷಕವಾದ ಛಾಯಾಚಿತ್ರ ದೊರೆಯಲು ಸಾಧ್ಯ‘ ಎಂದರು.

ಕಾರ್ಯಕ್ರಮದ ಕೇಂದ್ರಬಿಂದುವಾದ ಛಾಯಾಗ್ರಾಹಕ ಸೂರ್ಯಪ್ರಕಾಶ ಮಾತನಾಡಿ, ʼ32 ವರ್ಷಗಳ ಕಾಲ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಛಾಯಾಗ್ರಹಣವನ್ನು ಹವ್ಯಾಸವಾಗಿ ತೆಗೆದುಕೊಂಡೆ. ಛಾಯಾಗ್ರಹಣದ ದಂತಕಥೆಯಾದ ಶ್ರೀನಿವಾಸ್‌ ಅವರ ಮಾರ್ಗದರ್ಶನಲ್ಲಿ ನಾನು ಛಾಯಾಗ್ರಹಣದ ಪಟ್ಟುಗಳನ್ನು ಕಲಿತೆ. ಪ್ರತಿ ಸನ್ನಿವೇಶಗಳಲ್ಲಿಯೂ ನನ್ನ ಜೊತೆ ನಿಂತು ಛಾಯಾಗ್ರಹಣದ ವಿವಿಧ ಮಜಲುಗಳನ್ನು ತಿಳಿಸಿಕೊಟ್ಟರು. ಇವತ್ತು ನನಗೆ ವಿಶೇಷವಾದ ದಿನ. ಗುರುವಿನಿಂದ ಕಲಿತ ಒಂದೊಂದು ಪಾಠಗಳನ್ನು ಪ್ರದರ್ಶನಕ್ಕಿಟ್ಟು ಅವರಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿದ ಸುದಿನʼ ಎಂದರು.

ಇನ್ನು ಈ ಕಾರ್ಯಕ್ರಮದ ಕುರಿತು ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರು “ಸೂರ್ಯಪ್ರಕಾಶ್ ಕೆ.ಎಸ್ ಅವರ ಛಾಯಾಚಿತ್ರಗಳನ್ನು ನೋಡುವುದೇ ಕಣ್ಣಿಗೆ ಖುಷಿ. ಇವರ ಕೆಲವೊಂದು ಛಾಯಾಚಿತ್ರಗಳನ್ನು ನೋಡುತ್ತಿದ್ದರೆ ಅದನ್ನು ಫೋಟೋ ಎಂದು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ.ಅದು ಛಾಯಾಚಿತ್ರವಿದ್ದ ಹಾಗೇ ಇಲ್ಲ. ಯಾರೋ ಒಬ್ಬ ಕಲಾವಿದನ ಕೈಯಲ್ಲರಳಿದ  ಕಲಾಕೃತಿಯ ಹಾಗೆ ಇದೆ. ಈಗ ಯಾರ ಹತ್ತಿರ ಸ್ಮಾರ್ಟ್ ಫೋನ್ ಇದೆಯೋ ಅವರೆಲ್ಲರೂ ಫೋಟೊಗ್ರಾಫರ್ ಪತ್ರಕರ್ತರು! ನನಗೆ ಇರುವ ಪ್ರತಿಸ್ಪರ್ಧಿ ಎಂದರೆ ಮೊಬೈಲ್ ಎನ್ನಬಹುದು. ಜಯಕುಮಾರ್  ಹಾಗೂ ಇತರೆ ವನ್ಯಜೀವಿ ಛಾಯಾಚಿತ್ರಕಾರರು ಸೆಲ್ಫಿಯನ್ನು ತೆಗೆಯದೇ ನಿಜವಾದ ಚಿತ್ರಗಳನ್ನು ತೆಗೆದಿದ್ದರಿಂದ ನಮಗೆ ಕಾಡಿನ ಬಗ್ಗೆ ಒಂದಷ್ಟು ತಿಳಿಯಲು ಸಾಧ್ಯವಾಯಿತು.ಇನ್ನು  ನಾಡಿನಲ್ಲಿರುವ ಮನುಷ್ಯರಷ್ಟೂ ಅಪಾಯಕಾರಿ ಬೇರೆ ಯಾರೂ ಇಲ್ಲ ಅನ್ನಬಹುದು. ಸೌಂದರ್ಯ ದೃಷ್ಟಿಯಿಂದಲೂ ಪ್ರಾಣಿಗಳು ಅದ್ಭುತವಾದದ್ದು. ಪ್ರಾಣಿಗಳಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ ಎಂದರು.

Sneha Gowda

Recent Posts

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

18 seconds ago

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

14 mins ago

ಮಧ್ಯರಾತ್ರಿ ಸ್ನೇಹಿತರ ಎಣ್ಣೆ ಪಾರ್ಟಿ : ಬಾಟಲಿಯಿಂದ ಹೊಡೆದು ಓರ್ವನ ಕೊಲೆ

ಬಾಟಲಿಯಿಂದ ಹೊಡೆದು ಯುವಕನೋರ್ವನ ಕೊಲೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ.ಕೊಪ್ಪಳದ ಹೈದರ್ ತಾಂಡಾದ ನಿವಾಸಿ…

31 mins ago

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

47 mins ago

ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ಎನ್ಎಂಎಎಂ ಇನ್ಸ್ಟಿಟ್ಯೂಟ್‌ಗೆ ಪ್ರಥಮ

ಭಾರತದ 855 ಸಂಸ್ಥೆಗಳ 2,350 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಒಂಬತ್ತನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ…

49 mins ago

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

1 hour ago