ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬುಧವಾರ ಖರ್ಗೆ ಅವರನ್ನು ಅಭಿನಂದಿಸುತ್ತಾ, “ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ದೊರೆಯಲು ಅವರ ಬದ್ಧತೆ ಮತ್ತು ಸಮರ್ಪಣೆ ದೊಡ್ಡದು” ಎಂದು ಪೋಸ್ಟ್ ಮಾಡಿದೆ.
ತುಳಿತಕ್ಕೊಳಗಾದ ವರ್ಗಗಳು ಮತ್ತು ದಲಿತರ ಹೃದಯದಲ್ಲಿ ಖರ್ಗೆ ಅವರಿಗೆ ವಿಶೇಷ ಸ್ಥಾನವಿದೆ.” ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.
ಹೈದರಾಬಾದ್ ಸಂಸ್ಥಾನವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವುದನ್ನು ವಿರೋಧಿಸಿದ ರಜಾಕರ ದೌರ್ಜನ್ಯಕ್ಕೆ ಖರ್ಗೆ ಅವರ ಕುಟುಂಬವು ಒಳಗಾಗಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ರಜಾಕರು ಮನೆಗಳಿಗೆ ಬೆಂಕಿ ಹಚ್ಚಿದರು ಮತ್ತು ನೂರಾರು ಜನರನ್ನು ಕೊಂದರು. ಖರ್ಗೆ ಅವರ ತಾಯಿ ಮತ್ತು ಅವರ ಸಹೋದರರು ಬೆಂಕಿಯಿಂದ ಸುಟ್ಟು ಕರಕಲಾದರು. ಮನೆಯಿಂದ ಹೊರಗಿದ್ದ ಖರ್ಗೆ ಮತ್ತು ಅವರ ತಂದೆ ದಾಳಿಯಿಂದ ತಪ್ಪಿಸಿಕೊಂಡು ಕಲಬುರಗಿಯಲ್ಲಿ ನೆಲೆಸಿದರು.
ಇದು ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದ್ದರೂ, ಖರ್ಗೆ ಈ ಘಟನೆಯ ಬಗ್ಗೆ ಎಂದಿಗೂ ಮಾತನಾಡಿಲ್ಲ. ಅವರು ಕಾನೂನು ಪದವಿಯನ್ನು ಪೂರ್ಣಗೊಳಿಸಿದರು ಮತ್ತು ವಿದ್ಯಾರ್ಥಿ ನಾಯಕರಾಗಿ ಮತ್ತು ನಂತರ ಯೂನಿಯನ್ ನಾಯಕರಾಗಿ ಹೊರಹೊಮ್ಮಿದರು.