ಬೆಂಗಳೂರು: ಇದು ನಿಮ್ಮ ವಾಹಿನಿ ಕಲಾವೇದಿಕೆ (ರಿ) ಬೆಂಗಳೂರು ಅರ್ಪಿಸುವ ಡಾ. ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 17ನೇ ಭಾನುವಾರದಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9ವರೆಗೆ ಬೆಂಗಳೂರಿನ ಜೆಸಿ ರಸ್ತೆ, ಕನ್ನಡ ಭವನ ನಯನ ರಂಗ ಮಂದಿರದಲ್ಲಿ 9ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆಯಲಿದೆ.
ಈ ವೇಳೆ ಸಂಜೆ 6 ಗಂಟೆಗೆ ಉಪನ್ಯಾಸ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಬೆಂಗಳೂರು ಉಚ್ಚ ನ್ಯಾಯಾಲಯ ವಕೀಲರು ಪ್ರಮೀಳಾ ನೇರ್ಸಗಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬೆಂಗಳೂರು ಸಮಾಜಸೇವಕರು ಶಾಂತಾ ಕೃಷ್ಣಮೂರ್ತಿ ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಯ್ ಬೆಂಗಳೂರು ಪ್ರಧಾನ ಸಂಪಾದಕಿ ಭಾವನಾ ಬೆಳಗೆರೆ, ಸಹಸ ಕಲಾವಿದ ಅಪ್ಪು ವೆಂಕಟೇಶ್, ಬಿಗ್ ಬಾಸ್ ಸೀಸನ್ 10 ವಿನ್ನರ್ ಹಾಗೂ ಕಲಾವಿದ ಕಾರ್ತಿಕ್ ಮಹೇಶ, ಕೆಜಿಎಫ್ ಖ್ಯಾತಿಯ ಕಲಾವಿದ ಅನ್ಮೋಲ್ ವಿಜಯ್ ಭಟ್ಕಳ್ ಹಾಗೂ ಕಲಾವಿದ ಅವಿನಾಶ್ ಭಾಗಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ಎ.ಎಸ್ ಆರತಿ ಸುರೇಶ್ ನಿರ್ದೇಶನದಲ್ಲಿ ಎಸ್ ತಿಲಕ್ ರಾಜ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾಜೇಂದ್ರ ಹಳ್ಳೂರು ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ತನುಶ್ರೀ ಮತ್ತು ತಂಡದಿಂದ ಸಾಂಸ್ಕೃತಿಕ ಹಾಗೂ ನೃತ್ಯ ಪ್ರದರ್ಶನ, ನಾಟ್ಯ ಸನ್ನಿಧಿ ಕಲಾತಂಡದಿಂದ ಭರತನಾಟ್ಯ ಪ್ರದರ್ಶನ ಹಾಗೂ ಕಡಬ ಶ್ರೀನಿವಾಸ ಇವರಿಂದ ಜಾನಪದ ಜಾದು ಪ್ರದರ್ಶನ ನಡೆಯಲಿದೆ.
‘ಇದು ನಿಮ್ಮ ವಾಹಿನಿ’ ಪತ್ರಕರ್ತ ಕಿಶೋರ್ ಕುಮಾರ್ ಕೆಎಸ್, ನೃತ್ಯ ಕಲಾವಿದ ಸುಜೀತ್, ಮಾಧ್ಯಮ ಸಲಹೆಗಾರರು ಹಿರಿಯ ಪತ್ರಕರ್ತ ನಂಜುಂಡಪ್ಪ ವಿ., ರಾಜ್ ಸಂಪಾಜೆ ನಿರೂಪಣೆ, ಭರತನಾಟ್ಯ ನೃತ್ಯ ವರ್ಷಿಣಿ, ಕಿಶನ್ ಸುರ್ವೆ ಸುಸಂದರ್ಭದಲ್ಲಿ ಕಾರ್ಯಕ್ರಮವನ್ನು ನೀಡಲಿದ್ದಾರೆ, ಜೊತೆಗೆ ಉಪಸ್ಥಿತರಿರಲಿದ್ದಾರೆ.
ಪ್ರಶಸ್ತಿ ಪುರಸ್ಕೃತರು
ಅಜೀನ್ ಮುನಿಸ್ಸಾ ಸಿ. ಇ. ಓ . ವಿಕ್ಟರಿ ಅಕಾಡೆಮಿ, ಬೆಂಗಳೂರು
ಡಾ. ಸವಿತಾ ಕೆ.ಸಿ. ಸಂಸ್ಥಾಪಕರು, ಚರೀಶ್ ಕಿಡ್ಸ್, ಬೆಂಗಳೂರು
ಜ್ಯೋತಿ ರೆಡ್ಡಿ ಮಾಲೀಕರು, ಮೈ ಆಲ್ಬಂ ಝೊನ್ ಬೆಂಗಳೂರು
ಸೈಯದ್ ಸಾಧಿಕ್, ಮಾಲೀಕರು, ಡೈನಾಮಿಕ್ ಯುನಿವರ್ಸಲ್ ಮಾರ್ಕೆಟಿಂಗ್, ಬೆಂಗಳೂರು
ಪಿ. ಅರುಣಾಕುಮಾರಿ ಸಮಾಜಸೇವಕರು
ಆರ್. ಚಂದ್ರಶೇಖರ್ ಸಿನಿ-ಸಂಪಾದಕರು, ಕೋಲಾರವಾಣಿ ಪತ್ರಿಕೆ
ಶ್ಯಾಮ್ ಸುಂದರ್ ಟಿ. ಸಂಸ್ಥಾಪಕರು, ಯು ಟಿವಿ, ಯು ಟ್ಯೂಬ್ ಚಾನೆಲ್
ವಿರೇಶ್ ಎಸ್. ಕಂಟೆಂಟ್ ರೈಟರ್ ಮತ್ತು ಕ್ರಿಯೇಟರ್, ಕ್ಯಾನ್ಲಿಷ್ ನ್ಯೂಸ್, ಯು ಟ್ಯೂನ್ ಚಾನೆಲ್
ಬ್ರಿಜೇಶ್ ಗೋಖಲೆ
ಕಾರ್ಯನಿರ್ವಾಹ ನಿರ್ದೇಶಕರು, ನ್ಯೂಸ್ ಕರ್ನಾಟಕ, ಯೂ ಟ್ಯೂಬ್ ಚಾನೆಲ್
ಕಡಬ ಶ್ರೀನಿವಾಸ್ ಜಾನಪದ ಹಾಸ್ಯ ಜಾದುಗಾರ
ರಾಜೇಂದ್ರ ಹಳ್ಳೂರು ಜ್ಯೂ. ರಾಜ್ ಕುಮಾರ್ ಧ್ವನಿ ಗಾಯಕರು ಬೆಂಗಳೂರು
ತನುಶ್ರೀ ಭರತನಾಟ್ಯ ಗುರುಗಳು, ಬೆಂಗಳೂರು
ಎ. ಎಸ್. ಆರತಿ ಸುರೇಶ್ ಭರತನಾಟ್ಯ ಗುರುಗಳು, ಬೆಂಗಳೂರು
ಮೊನಿಶಾ ಭರತನಾಟ್ಯ ಗುರುಗಳು ಬೆಂಗಳೂರು
ಸಿ. ಎಸ್. ಮಹಾದೇವ್ ಪೂಜಾ ಕುಣಿತ ಕಲಾವಿದರು
ಸಿ.ಎಸ್. ಸಿದ್ದರಾಜು ಪೂಜಾ ಕುಣಿತ ಕಲಾವಿದರು
ಮಲ್ಲೇಶ್ ಗೊರವರ ಕುಣಿತ ಕಲಾವಿದರು
ದೊಡ್ಡಮಲ್ಲಯ್ಯ ಗೊರವರ ಕುಣಿತ ಕಲಾವಿದರು, ಹೊಸಹಳ್ಳಿ ಪಾಳ್ಯ
ಕುಮಾರ್ ಜಿ. ಗೊರವರ ಕುಣಿತ ಕಲಾವಿದರು
ರಾಮಕೃಷ್ಣ ಗೊರವರ ಕುಣಿತ ಕಲಾವಿದರು
ಮಧುಕುಮಾರ್ ಜೆ. ಗೊರವರ ಕುಣಿತ ಕಲಾವಿದರು
ಆನಂದ್ ಗೊರವರ ಕುಣಿತ ಕಲಾವಿದರು
ಗಣಾಚಾರಿ ಲಕ್ಷ್ಮೀನಾರಾಯಣ್ ಗೊರವರ ಕುಣಿತ ಕಲಾವಿದರು
ಮಹೇಶ್ ಸಿ. ಗೊರವರ ಕುಣಿತ ಕಲಾವಿದರು
ರಾಮು ಎ. ಎಸ್ ತಮಟೆ ಕಲಾವಿದರು
ಸುಮಂತ್ ತಮಟೆ ಕಲಾವಿದರು
ಸಿ. ಎಸ್ ಉಮೇಶ್ ವೀರಗಾಸೆ ಕಲಾವಿದರು.