ಬೆಂಗಳೂರು: ರೈತ ಸಂಘಟಣೆಗಳು ಕರೆದ ರಾಜ್ಯವ್ಯಾಪಿ ಬಂದ್ಗೆ ಹಲವಾರು ಸಂಸ್ಥೆಗಳು ಬೆಂಬಲಿಸುತ್ತಿವೆ. ಈ ಮಧ್ಯೆ ಬಿ.ಎಸ್. ಯಡಿಯೂರಪ್ಪ ರೈತರನ್ನು ಶೋಷಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಸಾಮಾಜಿಕ ಮಾಧ್ಯಮ ಮೂಲಕ ಮಾಧ್ಯಮ ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಪಿಎಂಸಿಗಳು ರಾಜ್ಯದ ರೈತರಿಗೆ ಸೇವೆ ಸಲ್ಲಿಸುತ್ತಲೇ ಇರುತ್ತವೆ. ರಾಜ್ಯದಲ್ಲಿ ಶೀಘ್ರದಲ್ಲಿ ಹೊಸ ಆಡಳಿತ ಪ್ರಾರಂಭವಾಗಲಿದೆ ಎಂದರು.
ಎಪಿಎಂಸಿಗಳನ್ನು ರದ್ದುಗೊಳಿಸಲಾಗುವುದಿಲ್ಲ, ಅವರು ರೈತರಿಗೆ ಸೇವೆ ಸಲ್ಲಿಸುತ್ತಾರೆ. ಆದಾಗ್ಯೂ ಹೊಸ ವ್ಯವಸ್ಥೆಯಿಂದ ಶೇಕಡ 80 ರಷ್ಟು ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೆಲವು ವಾರಗಳ ನಂತರ ನಾನು ವೈಯಕ್ತಿಕವಾಗಿ ರೈತರನ್ನು ಭೇಟಿ ಮಾಡುತ್ತೇನೆ. ಯಾರದಾರೂ ರೈತರನ್ನು ಶೋಷಿಸಿರುವುದು ಕಂಡು ಬಂದರೆ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.
ಒಬ್ಬ ರೈತನ ಮಗನಾಗಿ ಜನಿಸಿದ್ದೇನೆ, ರೈತರ ಆದ್ಯತೆ ಮತ್ತು ಆಸಕ್ತಿಯನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ ಎಂದರು.