ಬೆಂಗಳೂರು: ಕರ್ನಾಟದಲ್ಲಿ ಇನ್ನೂ ಐವರಿಗೆ ಕೊರೊನಾ ವೈರಸ್ನ ಹೊಸ ರೂಪಾಂತರ ಓಮಿಕ್ರಾನ್ ಕಾಣಿಸಿಕೊಂಡಿದೆ.ಗುರುವಾರ ಟ್ವೀಟ್ ಮಾಡಿರುವ ಸುಧಾಕರ್, “ಕರ್ನಾಟಕದಲ್ಲಿ ಇಂದು ಇನ್ನೂ ಐದು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ,” ಎಂದು ತಿಳಿಸಿದ್ದಾರೆ.
ಈ ಮೂಲಕ ಕರ್ನಾಟಕದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ಏರಿಕೆ ಆಗಿದೆ. ಈ ಬಗ್ಗೆ ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
“ರಾಜ್ಯದಲ್ಲಿ ಇನ್ನೂ ಐವರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಯುಕೆಯಿಂದ ವಾಪಾಸ್ ಬಂದ 19 ವರ್ಷದ ವ್ಯಕ್ತಿಯಲ್ಲಿ, ದೆಹಲಿಯಿಂದ ವಾಪಾಸ್ ಬಂದ 36 ವರ್ಷದ ವ್ಯಕ್ತಿಯಲ್ಲಿ, ದೆಹಲಿಯಿಂದ ಬಂದ 70 ವರ್ಷದ ಮಹಿಳೆಯಲ್ಲಿ, ನೈಜಿರಿಯಾದಿಂದ ಬಂದ 52 ವರ್ಷದ ವ್ಯಕ್ತಿಯಲ್ಲಿ, ದಕ್ಷಿಣ ಆಫ್ರಿಕಾದಿಂದ ಬಂದ 33 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ,” ಎಂದು ಕೆ ಸುಧಾಕರ್ ಹೇಳಿದ್ದಾರೆ.