ಬೆಂಗಳೂರು : ನಗರದ ಗವಿಪುರಂನಲ್ಲಿರುವ ಐತಿಹಾಸಿಕ ದೇವಾಲಯ ಗವಿಗಂಗಾಧರೇಶ್ವರ ದೇಗುಲದಲ್ಲಿರುವ ಮಹಾ ಶಿವನಿಗೆ ಸೂರ್ಯರಶ್ಮಿ ಸ್ವರ್ಶವಾಗಿದೆ. ಇಂದು ಮಕರ ಸಂಕ್ರಾಮಣದ ದಿನ ಸೂರ್ಯ ತನ್ನ ಪಥವನ್ನ ಬದಲಾಯಿಸುತ್ತಾನೆ. ಅದ್ರಂತೆ, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ ಸೂರ್ಯ ಇಂದು, ಗವಿಗಂಗಾಧರೇಶ್ವರನನ್ನ ನಮಿಸಿದ್ದಾನೆ.
ದೇವಾಲಯದಲ್ಲಿರುವ ಲಿಂಗದ ಮುಂದಿರುವ ನಂದಿಕೊಂಬಿನಿಂದ ಹಾದು ಶಿವನ ಸ್ಪರ್ಶ ಮಾಡಿದ ಸೂರ್ಯ ರಶ್ಮಿ, ಗವಿ ಗಂಗಾಧರನಿಗೆ ಸಂಕ್ರಮಣದ ಅಭಿಷೇಕ ಮಾಡಿದೆ. ಇನ್ನು ಈ ಸೂರ್ಯರಶ್ಮಿ ಸ್ಪರ್ಶ ನಂತರ ಲಿಂಗರೂಪಿ ಶಿವನಿಗೆ ವಿಶೇಷ ಅಭಿಷೇಕ ಮಾಡಲಾಯ್ತು. ಅಂದ್ಹಾಗೆ, ಕೋವಿಡ್ ಕಾರಣದಿಂದ ಗವಿಗಂಗಾಧರೇಶ್ವರನನ್ನ ಕಣ್ತುಂಬಿಕೊಳ್ಳಲು ಭಕ್ತರಿಗೆ ಅವಕಾಶ ನೀಡಲಾಗಿಲ್ಲ.
ಅಂದ್ಹಾಗೆ, ಕಳೆದ ವರ್ಷ ಸಂಕ್ರಾಂತಿಯ ದಿನ ಕೊನೆ ಕ್ಷಣದಲ್ಲಿ ಮೋಡ ಕವಿದ ಕಾರಣ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳಲಿಲ್ಲ. ಇದು ಮುಂದಾಗುವ ಆಪಾಯ ಸೂಚನೆ ಎಂದೇ ಆನೇಕರು ಹೇಳಿದ್ರು. ಅದ್ರಂತೆ, ಕಳೆದ ವರ್ಷ ಕೊರೊನಾ ಕಾರಣ ಕಾರಣದಿಂದ ಸಾವಿರಾರು ಜನರು ಸಾವನ್ನಪ್ಪಿದ್ರು. ಇನ್ನು ಆನೇಕ ಗಣ್ಯರು ಕೂಡ ಅಕಾಲಿಕವಾಗಿ ಸಾವನ್ನಪ್ಪಿದ್ರು.
ಆದ್ರೆ, ಈ ಬಾರಿ ಸೂರ್ಯ ರಶ್ಮಿಯೂ ಯಾವುದೇ ಅಡ್ಡಿಯಿಲ್ಲದೇ ನಂದಿಯ ಗೊಂಬಿನ ಮೂಲಕ ಮಹಾಶಿವನನ್ನ ಸ್ಪರ್ಶಿಸಿದೆ. ಈ ಸಂಪೂರ್ಣ ಸೂರ್ಯ ರಶ್ಮಿಯ ಅಭಿಷೇಕ ಭಕ್ತರಿಗೆ ಖುಷಿ ನೀಡಿದ್ದು, ಇದು ಶುಭ ಸೂಚಕದ ಸಂಕೇತವಾಗಿ ಎನ್ನಲಾಗ್ತಿದೆ.