ಬೆಂಗಳೂರು: ಉಡುಪಿಯ ಅಜ್ಜರಕಾಡು ಮೈದಾಣದಿಂದ ವಾಯುಪಡೆಯ ಹೆಲಿಕಾಪ್ಟರ್ ಪೇಜಾವರ ವಿಶ್ವೇಶ ತೀರ್ಥರ ಪಾರ್ಥಿವ ಶರೀರ ಹೊತ್ತು ಬೆಂಗಳೂರು ತಲುಪಿದೆ.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಇದರ ಬಳಿಕ ಸಂಜೆ 5.30ರ ವೇಳೆಗೆ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕೆ ತಂದು ಎಂಟು ಗಂಟೆಯ ಒಳಗಡೆ ಬೃಂದಾವನದ ವಿಧಿವಿಧಾನಗಳು ಪೂರ್ಣವಾಗಲಿದೆ.
ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವ ಕಾರಣದಿಂದಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.