ಬೆಂಗಳೂರು,ಡಿ.25 : ಗಾಂಜಾ ನಶೆಯಲ್ಲಿ ಮೂವರು ಆರೋಪಿಗಳು ಸ್ನೇಹಿತನ ಮನೆಗೆ ನುಗ್ಗಿ ಆಪರೇಷನ್ ಬ್ಲೇಡ್ನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಘಟನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲಸೂರಿನ ಮಿನ್ಯೂಸ್(18) ಕೊಲೆಯಾದ ಯುವಕ.
ನಿನ್ನೆ ಸಂಜೆ ಮರ್ಫಿಟೌನ್ನಲ್ಲಿ ಮಿನ್ಯೂಸ್ ಮತ್ತು ಸಂತೋಷ್ ನಡುವೆ ಗಲಾಟೆಯಾಗಿದೆ. ಮಧ್ಯರಾತ್ರಿ ಆರೋಪಿಗಳು ಮಿನ್ಯೂಸ್ ಮನೆಗೆ ನುಗ್ಗಿದ್ದಾರೆ. ಗಾಂಜಾ ನಶೆಯಲ್ಲಿದ್ದ ಆರೋಪಿಗಳು ಮಿನ್ಯೂಸ್ ಜೊತೆ ಮಾತಿನ ಚಕಮಕಿ ನಡೆಸಿ ಆಪರೇಷನ್ ಬ್ಲೇಡ್ನಿಂದ ಕತ್ತಿಗೆ ಚುಚ್ಚಿದ್ದಾರೆ. ನಂತರ ಕುತ್ತಿಗೆ ಸೀಳಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಿನ್ಯೂಸ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆರೋಪಿ ಸಂತೋಷ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.