ಬೆಂಗಳೂರು : ಚಿತಾಭಸ್ಮ ವಿಸರ್ಜನೆ ಮಾಡಿದ್ದ ಕಂದಾಯ ಸಚಿವ ಆರ್. ಅಶೋಕ್ ಈಗ ಮತ್ತೊಂದು ಮಾನವೀಯ ಕಾರ್ಯ ನಡೆಯುತ್ತಿದೆ.
ಅನಾಥ ಶವಗಳ ಅಂತ್ಯಕ್ರಿಯೆ ಮಾಡಿಸಿ ಚಿತಾಭಸ್ಮ ವಿಸರ್ಜನೆ ಮಾಡಿದ್ದ ಆರ್ ಅಶೋಕ್ ಇದೀಗ ಪಿತೃಪಕ್ಷದ ನಿಮಿತ್ತ ಪಿಂಡ ಪ್ರದಾನ ಮಾಡಲು ತಿರ್ಮಾನ ಮಾಡಿದ್ದಾರೆ.
ಅಕ್ಟೋಬರ್ 4 ರಂದು ಶ್ರೀರಂಗಪಟ್ಟಣದ ಕಾವೇರಿ ಘಾಟ್ ನಲ್ಲಿ ಪಿಂಡ ಪ್ರದಾನ ಮಾಡಲು ತಿರ್ಮಾನ ಮಾಡಿದ್ದಾರೆ. ಹಿಂದು ಸಂಪ್ರದಾಯದಂತೆ ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡುವ ಮಹತ್ವದ ಕಾರ್ಯ ಮಾಡಲಿರುವ ಅಶೋಕ್, ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಿದ್ದಾರೆ.