News Karnataka Kannada
Wednesday, May 01 2024
ಬೆಂಗಳೂರು ನಗರ

ಪಾಸಿಟಿವಿಟಿ ರೇಟ್ ಆಧಾರದ ಲಾಕ್ ಡೌನ್ ಮುಂದೂಡನೆ ನಿರ್ಧಾರ : ಆರ್ ಅಶೋಕ್

Photo Credit :

ಪಾಸಿಟಿವಿಟಿ ರೇಟ್ ಆಧಾರದ ಲಾಕ್ ಡೌನ್ ಮುಂದೂಡನೆ ನಿರ್ಧಾರ : ಆರ್ ಅಶೋಕ್

ಬೆಂಗಳೂರು: ರಾಜ್ಯದಲ್ಲಿ ತಜ್ಞರ ವರದಿಯನ್ನು ಆಧರಿಸಿ ಲಾಕ್ ಡೌನ್ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಸಿಟಿವಿಟಿ ರೇಟ್ ಆಧಾರದ ಮೇಲೆ ತೀರ್ಮಾನ ಮಾಡಿದ್ದೇವೆ.

ಬೆಂಗಳೂರು ನಿತ್ಯ 500 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ಬರಬೇಕು. ರಾಜ್ಯದಲ್ಲಿ ಎತಡು ಸಾವಿರ ಮೂರು ಸಾವಿರದಷ್ಟು ಕೋವಿಡ್ ಪ್ರಕರಣಗಳು ಇಳಿಕೆಯಾಗಬೇಕು. ಆಗ ಮಾತ್ರ ಲಾಕ್ ಡೌನ್ ಕೈ ಬಿಡುವ ಬಗ್ಗೆ ತೀರ್ಮಾನ ಮಾಡಬಹುದು ಎಂದರು.

ಕೋವಿಡ್ ಸಂಬಂಧಿತ ಸಚಿವರ ಸಭೆ ನಾಳೆ ಇದೆ. ಎರಡು ದಿನಕ್ಕೊಮ್ಮೆ ಚರ್ಚೆ ಮಾಡುತ್ತೇವೆ. ಜೂನ್ 5 ಅಥವಾ 6ರೊಳಗೆ ಲಾಕ್ ಡೌನ್ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಮೊದಲ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಮೇಕ್ ಶಿಪ್ಟ್ ಆಸ್ಪತ್ರೆಗೆ‌ ತಯಾರಿ ಮಾಡಲಾಗಿದೆ. ಪೂರ್ಣ ವೈದ್ಯಕೀಯ ಸಲಕರಣೆಗಳೊಂದಿಗೆ ಆಸ್ಪತ್ರೆ ‌ನಿರ್ಮಾಣ ಮಾಡಲಾಗುವುದು. ಆಸ್ಪತ್ರೆ ರೆಡಿಮೆಡ್ ಆಗಿ ಬರುತ್ತದೆ.

ವಾಟರ್ ಮತ್ತು ಸಾನಿಟೈಸರ್ ಕನೆಕ್ಷನ್ ಅಷ್ಟೇ ಮಾಡುತ್ತೇವೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇಂತಹ ಆಸ್ಪತ್ರೆ ಆಗುತ್ತಿದೆ ಎಂದು ಅವರು ತಿಳಿಸಿದರು‌ 100 ಹಾಸಿಗೆ ಆಸ್ಪತ್ರೆ ಇದಾಗಿದ್ದು, 70 ಹಾಸಿಗೆ ಐಸಿಯು 10 ಹಾಸಿಗೆ ವೆಂಟಿಲೇಟರ್ ಒಳಗೊಂಡಿದ್ದು, ಹದಿನೈದು ದಿನಗಳಲ್ಲಿ ಮೇಕ್ ಶಿಪ್ಟ್ ಆಸ್ಪತ್ರೆ ಸಿದ್ಧ ಮಾಡುತ್ತೇವೆ. ದೊಡ್ಡಬಳ್ಳಾಪುರ ಭಾಗದ ಜನರಿಗೆ ಈ ಆಸ್ಪತ್ರೆ ಉಪಯೋಗವಾಗುತ್ತದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು