ಬೆಂಗಳೂರಿನ ಸಂಚಲನ ಸಂಸ್ಕೃತಿ ವೇದಿಕೆ ಮತ್ತು ಗೋವಿಂದರಾಜನಗರದ ಕಿರಂ ಪ್ರಕಾಶನದ ಜಂಟಿ ಆಶ್ರಯದಲ್ಲಿ ಲೇಖಕ ಡಾ.ಕರೀಗೌಡ ಬೀಚನಹಳ್ಳಿ ಅವರ ಬದುಕು ಕೃತಿಗಳ ವಿಮರ್ಶಾ ಗ್ರಂಥ ‘ಸಾಂಗತ್ಯ’ ಕೃತಿಯ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭವು 2022 ಎಪ್ರಿಲ್ 05 ಮಂಗಳವಾರದಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಪ್ರೊ. ಕೆ. ವೆಂಕಟಗಿರಿಗೌಡ ಸ್ಮಾರಕ ಭವನದ ಆಶ್ರಯದಲ್ಲಿ ನಡೆದಿದ್ದು,ಈ ವೇಳೆ ಅವರ ಮಾತನಾಡಿದರು.
ಭವಿಷ್ಯದ ಪ್ರಜೆಗಳನ್ನ ಸಿದ್ಧಪಡಿಸುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಸರ್ಕಾರ, ಕುಗ್ರಾಮದಲ್ಲೂ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕೆಂಬ ಉದ್ದೇಶದಿಂದ ಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಸರ್ಕಾರದ ಈ ಉದ್ದೇಶಕ್ಕೆ ಎಲ್ಲರೂ ನೆರವಾಗಬೇಕು. ಸರ್ವರಿಗೂ ಶಿಕ್ಷಣ ಸಲ್ಲಬೇಕು ಎಂಬುದಾಗಿ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಮರುಳಸಿದ್ಧಪ್ಪ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಭಾರತೀಯ ಕಥಾ ಪರಂಪರೆಯಲ್ಲಿ ಕನ್ನಡದ ಜೊತೆಗೆ ಸರಿಸಮವಾಗಿ ನಿಲ್ಲಬಲ್ಲವು ಬೆರಳೆಣಿಕೆಯಷ್ಟಿವೆ. ಇಂತಹ ಕಥಾ ಪರಂಪರೆಯ ಭಾಗವಾಗಿ ಅದನ್ನು ಮುಂದುವರಿಸಿಕೊಂಡು ಬಂದಿರುವವರು ಕರೀಗೌಡರು ಎನ್ನಲು ಹೆಮ್ಮೆಯಾಗುತ್ತದೆ. ಕನ್ನಡ ಕತೆಗಳನ್ನು ಸೃಜನಾಶೀಲವಾಗಿ ಸಮೃದ್ಧಗೊಳಿಸುವುದರ ಜೊತೆಗೆ ಕನ್ನಡ ಕತಾ ಪರಂಪರೆಯ ವ್ಯಾಖ್ಯಾನವನ್ನು ವಿಮರ್ಶೆಯ ಜೊತೆ ಜೊತೆಗೆ ನಡೆಸಿಕೊಂಡು ಬಂದವರು ಕರೀಗೌಡರು ಎಂಬುದಾಗಿ ಅವರು ನುಡಿದರು.
‘ಸಾಂಗತ್ಯ’ ಗ್ರಂಥ ಸಂಪಾದಕರು ಅಗ್ರಹರ ಕೃಷ್ಣಮೂರ್ತಿ ಮಾತನಾಡಿ, ಸಾಂಗತ್ಯ ಎಂಬ ಪದ ಇಂದಿನ ದಿನದಲ್ಲಿ ಅಗತ್ಯವಾಗಿ ಇರಬೇಕಿಗಿರುವ ಕೂಡು ಬಾಳುವಿಕೆಯನ್ನುಸೂಚಿಸುವ ಪದ, ಸೌಹಾರ್ದತೆಯನ್ನು ಸಾರುವ ಪದವೂ ಹೌದು. ಸಾಂಗತ್ಯದ ಪರಿಕಲ್ಪನೆಯನ್ನು ಕರೀಗೌಡರು ಅವರ ಅನೇಕ ಕತೆ, ಲೇಖನಗಳ ಮೂಲಕ ಕಳೆದ 40 ವರ್ಷಗಳ ಹಿಂದೆಯೇ ತಿಳಿಸಿದ್ದಾರೆ. ಇಂದಿಗೂ ಸೌಹಾರ್ದತೆಯ ಬಗೆಗಿನ ದಿಟ್ಟ ನಿಲುವು ಹೊಂದಿರುವ ಕರೀಗೌಡರ ಬಗೆಗಿನ ಕೃತಿಗೆ ಇದಕ್ಕಿಂತ ಉತ್ತಮ ಶೀರ್ಷಿಕೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದರು.
ಡಾ.ಕರೀಗೌಡ ಬೀಚನಹಳ್ಳಿ ಅವರು ಮಾತನಾಡಿ, ಇಂದಿನ ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರು ಹಾಗೂ ಲೇಖಕರ ಪಾತ್ರ ಪ್ರಮುಖವಾಗಿದೆ. ಅವೆರಡು ಪಾತ್ರಗಳು ಭಿನ್ನವೆನ್ನಿಸಿಲ್ಲ. ಸಮಾಜದಲ್ಲಿ ನಾಗರಿಕನನ್ನು ರೂಪಿಸುವಲ್ಲ ಇಬ್ಬರ ಪಾತ್ರವೂ ಮುಖ್ಯ ಎಂಬುದಾಗಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಡಾ. ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಸೃಜನಶೀಲ ವ್ಯಕ್ತಿ ಕೃತಿ ರಚನೆ ಮಾಡುವಲ್ಲಿ ವಯಸ್ಸಿನ ಮಿತಿ ಬರುವುದಿಲ್ಲ ಎಂಬುದಕ್ಕೆ ಕರೀಗೌಡ ಅವರು ಸಾಕ್ಷಿ.ಕರೀಗೌಡರು ಮೌನದಲ್ಲಿ ಕ್ರಾಂತಿ ಮಾಡುವವರು ಎಂಬುದಾಗಿ ಕರೀಗೌಡರೊಂದಿಗಿನ ವೃತ್ತಿಯ ದಿನಗಳನ್ನ ನೆನಪಿಸಿಕೊಂಡರು.
https://youtu.be/9jjbSFKnVzE ಲೈವ್ ಲಿಂಕ್
ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್ಗಳಿಂದ…
ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ. ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…
ಶನಿವಾರ ತಡರಾತ್ರಿ ನಡೆದ ಐಪಿಎಲ್ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್…
ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…