ಬೆಂಗಳೂರು: ಹಿಜಾಬ್ ವಿವಾದ ಬಂದ್ ಆಗಿರುವ ಕಾಲೇಜುಗಳ ಆರಂಭ ಕುರಿತು ಸೋಮವಾರ ಏನಾಗಲಿದೆ ಎಂದು ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ.ಕಾಲೇಜು ಆರಂಭದ ಕುರಿತು ಸಚಿವರು ಮಾಹಿತಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,ಎರಡು ದಿನ ಶಿಗ್ಗಾಂವ ಪ್ರವಾಸಕ್ಕೆ ತೆರಳುತ್ತಿದ್ದೇನೆ.ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ.ಕಾಲೇಜು ಆರಂಭದ ಕುರಿತು ಸಚಿವರು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತ್ ಮೀಸಲಾತಿ ಪರುಪರೀಶಿಲನೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಸುಪ್ರೀಂ ಕೋರ್ಟ್ ಅದೇಶ ನೀಡಿದೆ. ಹೀಗಾಗಿ ಅಡ್ವಕೋಟ್ ಜನರಲ್ ಜೊತೆ ಚರ್ಚ್ ಮಾಡಿ ಸಭೆ ಕರೆಯಲಿದ್ದೇನೆ ಎಂದು ತಿಳಿಸಿದರು.