ಬೆಂಗಳೂರು:ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಕಲಿ ಟಿಕೆಟ್ ನೀಡಲು ಬಳಸುತ್ತಿದ್ದ ಸಾಧನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ರೈಲ್ವೇ ಟಿಕೆಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ದಾಳಿ ಮಾಡಿದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಸಿಬ್ಬಂದಿಗಳು ಇಬ್ಬರು ಅಪ್ರಾಪ್ತ ಬಾಲಕರನ್ನು ಬುಧವಾರ ರಕ್ಷಿಸಿದ್ದಾರೆ.
ಈ ಪ್ರತ್ಯೇಕ ಘಟನೆಯಲ್ಲಿ ಯಶವಂತಪುರದಲ್ಲಿ ರೈಲಿನಲ್ಲಿ ಬಿಟ್ಟು ಹೋಗಿದ್ದ ಪ್ರಯಾಣಿಕರ ಲ್ಯಾಪ್ಟಾಪ್ ಸೇರಿದಂತೆ 73,200 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡರು ಎನ್ನಲಾಗಿದೆ.
ಆರ್ ಪಿಎಫ್ ಅಧಿಕೃತ ಪ್ರಕಟಣೆಯ ಪ್ರಕಾರ, 14 ಮತ್ತು 16 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕರನ್ನು ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬೆಂಗಳೂರು ಕಂಟೋನ್ಮೆಂಟ್ ಸ್ಚೇಷನ್ ನ ಸಬ್ ಇನ್ಸ್ಪೆಕ್ಟರ್ ಅನುಷಾ ಅವರ ನೇತೃತ್ವದಲ್ಲಿ ರಕ್ಷಿಸಿದ್ದಾರೆ. ಅವರನ್ನು ಮಕ್ಕಳ ರಕ್ಷಣಾ ಗುಂಪು, ಬಾಸ್ಕೋಗೆ ಹಸ್ತಾಂತರಿಸಲಾಯಿತು.
ಅಂತೆಯೇ ಆರ್ಪಿಎಫ್ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್ ಕಂಟೋನ್ಮೆಂಟ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎರಡು ವೈಯಕ್ತಿಕ ಐಡಿಗಳೊಂದಿಗೆ ಇ-ಟಿಕೆಟ್ಗಳನ್ನು ಉತ್ಪಾದಿಸುತ್ತಿದ್ದ ಮತ್ತು ನಕಲಿ ಟಿಕೆಟ್ ಒದಗಿಸುತ್ತಿದ್ದ ಅಮೀನುಲ್ಲಾ ಖಾನ್ ಎಂಬಾತನನ್ನು ಬಂಧಿಸಿದರು.
ಆತನಿಂದ ರೂ. 30,000 ಮೌಲ್ಯದ ಆತನ ಸಾಧನವನ್ನು ಹಲವಾರು ನೇರ ಟಿಕೆಟ್ಗಳೊಂದಿಗೆ ವಶಪಡಿಸಿಕೊಳ್ಳಲಾಗಿದ್ದು, ಆತನ ವಿರುದ್ಧ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಶವಂತಪುರ ರೈಲು ನಿಲ್ದಾಣದಲ್ಲಿ, ಸಬ್ ಇನ್ಸ್ಪೆಕ್ಟರ್ ಎಂ ಪರಮೇಶ್ ಮತ್ತು ಅವರ ತಂಡವು ಒಂದು HP ಲ್ಯಾಪ್ಟಾಪ್, ನೋಕಿಯಾ ಮೊಬೈಲ್ ಫೋನ್, ಚೆಕ್ ಪುಸ್ತಕಗಳು, ಬ್ಯಾಂಕ್ ಕಾರ್ಡ್ಗಳು ಮತ್ತು 73,200 ರೂ ಮೌಲ್ಯದ ಇತರ ವಸ್ತುಗಳನ್ನು ಹೊಂದಿರುವ ಚೀಲವನ್ನು ವಶಪಡಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.