ಬೆಂಗಳೂರು : ಟಾಲಿವುಡ್ ಖ್ಯಾತ ನಟ ಅಲ್ಲುಅರ್ಜುನ್ ಬೆಂಗಳೂರಿಗೆ ಆಗಮಿಸಿ ನಟ ಪುನೀತ್ ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.
ಮೊದಲು ನಟ ಶಿವರಾಜ್ಕುಮಾರ್ ಮನೆಗೆ ತೆರಳಿ ಅಲ್ಲಿಂದ ಕಂಠೀರವ ಸ್ಟುಡಿಯೋಗೆ ತೆರಳಿದರು.ನಟ ಪುನೀತ್ ಜೊತೆಗಿನ ಒಡನಾಟವನ್ನ ಸ್ಮರಿಸುತ್ತಾ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಅಂದ್ಹಾಗೆ, ಈ ಹಿಂದೆ ನಟ ಪುನೀತ್ ಆಗಲಿದಾಗ ಈ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ‘ಪುನೀತ್ ನನಗೆ ಮೊದಲಿನಿಂದಲೂ ಗೊತ್ತು, ಅವರು ನಮ್ಮ ಮನೆಗೆ ಬರುತ್ತಿದ್ದರು, ಊಟ ಮಾಡುತ್ತಿದ್ದರು. ನಾನು ಬೆಂಗಳೂರಿಗೆ ಹೋದಾಗ ಅವ್ರ ಮನೆಗೆ ಹೋಗ್ತಿದ್ದೆ. ಇದ್ದಕ್ಕಿದ್ದ ಹಾಗೆ ಅವ್ರು ಈಗ ಇಲ್ಲ. ನನಗೆ ತುಂಬಾ ಶಾಕ್ ಆಯ್ತು’ ಎಂದಿದ್ದರು.