ಕಮಲನಗರ: ಪತಿ, ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿಗ್ಗಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜರುಗಿದೆ.ಸಂಜೀವಕುಮಾರ ಗುಂಡಪ್ಪ ಬರ್ಗೆ (42) ಹಾಗೂ ಸವಿತಾ ಬರ್ಗೆ (37) ಮೃತಪಟ್ಟವರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಸಂಜೀವಕುಮಾರ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮನೆ ಕಟ್ಟಲು ಖಾಸಗಿ ಸಾಲ ಪಡೆದಿದ್ದರು. ಡಿಗ್ಗಿ ಗ್ರಾಮದ ನೂತನ ಅಬಾಧಿ ಪ್ರದೇಶದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದ ಅವರು ಸಾಲಬಾಧೆ ತಾಳಲಾರದೇ ಜೀವನದಲ್ಲಿ ಜುಗುಪ್ಸೆಗೊಂಡು ಪತ್ನಿಯೊಂದಿಗೆ ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಜೇಮ್ಸ್, ಸಿಪಿಐ ಘಾಳೆಪ್ಪ, ಎಎಸ್ಐ ಚಿದಾನಂದ ಮಠ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಸಂಜೀವಕುಮಾರ ಅವರ ತಾಯಿ ನೀಲಮ್ಮ ಗುಂಡಪ್ಪ ಬರ್ಗೆ ನೀಡಿದ ದೂರು ನೀಡಿದ ಹಿನ್ನೆಲೆಯಲ್ಲಿ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.