News Karnataka Kannada
Thursday, May 02 2024
ಬೆಂಗಳೂರು

ಬೆಂಗಳೂರು: ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ

Bengaluru: Gowri Sundar's annual awards ceremony and book release ceremony
Photo Credit : G Mohan

ಬೆಂಗಳೂರು: ಕನ್ನಡ ಮತ್ತು ಮರಾಠಿ ಭಾಷೆಯ ಪ್ರಖ್ಯಾತ ಸಾಹಿತಿ ಜಯದೇವ ತಾಯಿ ಲಿಗಾಡೆ ಅವರನ್ನ ನಾನು ಹತ್ತಿರದಿಂದ ಬಲ್ಲೆ ಎಂದು ಕವಿ ಹೆಚ್ .ಎಸ್ . ವೆಂಕಟೇಶ ಮೂರ್ತಿ ಅವರು  ಹೇಳಿದರು.

ಅವರು 2023 ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ  ಮತ್ತು ಲೇಖಕಿ ಮಧುಬಾಲ ಬಿ. ಲಿಗಾಡೆ ಅವರು ರಚಿಸಿರುವ ಅಪರ್ಣಾ ಪುಸ್ತಕ ಬಿಡುಗಡೆ ಸಮಾರಂಭವು ನಗರದ ಇಂಡಿಯನ್ ಇಂಸ್ಟಿಟ್ಯೂಟ್ ಆಫ್  ವರ್ಲ್ಡ್ ಕಲ್ಚರ್ ಸಭಾಂಗಣದ ಸುಂದರ ಪ್ರಕಾಶನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ತಾಯಿ ಲಿಗಾಡೆ ಅವರ ಸೊಸೆ ಮಧುಬಾಲ ಲಿಗಾಡೆ ನನಗೆ ಪರಿಚಯವಿಲ್ಲದಿದ್ದರೂ ಅವರ ಸ್ತ್ರೀಯರ ಮೇಲಿನ ಕಾಳಜಿ ಅವರ ಪುಸ್ತಕದಲ್ಲಿ ಬಿಂಬಿಸಿದೆ ಹಾಗಾಗಿ ಅವರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು. ಅವರ ಅತ್ತೆಯ ಸಾಧನೆ ಮಹಿಳಾ ಲೋಕಕ್ಕೆ ಸಾರ್ವಕಾಲಿಕ ಗೌರವ , ಇಂತಹ ಕಾರ್ಯಕ್ರಮ ಆಯೋಜಿಸಿದ್ದ ಇಂದಿರಾ ಸುಂದರ್ ಅವರನ್ನೂ ಪ್ರಶಂಸಿಸುತ್ತೇನೆ ಎಂದರು. ಎ ಎಸ್  ಮೂರ್ತಿ ಕುಟುಂಬದವರು ನನಗೆ ಆತ್ಮೀಯರು ಎಂದು ಹೇಳಿದರು.

ತಮ್ಮ ವಿದ್ಯಾರ್ಥಿ ಜೀವನ ಸ್ಮರಿಸಿಕೊಂಡ ಅವರು , ನಾನು ಕವಿಯಾದೆ ಪೂರ್ಣಿಮ ಅವರು ಪತ್ರಕರ್ತೆಯಾದರು , ಅವರ ಗಂಭೀರ ಸ್ವಭಾವ ನನ್ನಲ್ಲಿ  ಅವರ ಬಗ್ಗೆ ಗೌರವ ಹೆಚ್ಚಾಯಿತು . ಎಂದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ಸಂತಸ ತಂದಿತು ಎಂದು ತಿಳಿಸಿದರು.

2023 ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ ಪಡೆದ ನಂತರ ಮಾತನಾಡಿದ ಪತ್ರಕರ್ತೆ ಪುರ್ಣಿಮಾ ಅವರು 5000 ಪುಸ್ತಕ ಹೊರತಂದ ಗೌರಿಸುಂದರ ಪ್ರಕಾಶನದ ಸಾಧನೆ ಸುಲುಭದ ಸಾಧನೆಯಲ್ಲ , ಅದರಲ್ಲೂ ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅದ್ಭುತ ಇಂತಃ ಪ್ರಾಕಾಶನವು ಖ್ಯಾತ ಕವಿ ವೆಂಕಟೇಶ ಮುರ್ತಿ ಅವರಿಂದ ನನಗೆ ಪ್ರಶಸ್ತಿ ಕೊಡಿಸಿರುವುದು ಸಂತಸ ತಂದಿದೆಯೆಂದು ಅಭಿಪ್ರಾಯಪಟ್ಟರು .

ಅಪರ್ಣ ಪುಸ್ತಕದ ಲೇಖಕಿ ಮಧುಬಾಲ ಲಿಗಾಡೆ ಮಾತನಾಡಿ ನಾನು ಹೆಣ್ಣಾಗಿರುವುದರಿಂದ ಹೆಣ್ಣುಮಕ್ಕಳ ಕಷ್ಟ ಏನೆಂದು ಬಲ್ಲೆ ನನ್ನ ಕಾದಂಬರಿಗಳು ಶರಣ ಸಾಹಿತ್ಯದಿಂದ ಶುರುವಾಗಿ ಇಂದು ಐತಿಹಾಸಿಕ ಕಾದಂಬರಿ ವರೆಗೂ ಬರೆದಿದ್ದೇನೆ ಅದರಲ್ಲೂ ಹೆಣ್ಣಿನ ಸಾಧನೆಯ ಬಗ್ಗೆ ಬರೆಯಲ್ಲೂ ಹೆಮ್ಮೆಯೆನಿಸುತ್ತದೆ. ಮನೆಯಲ್ಲಿ ಹೆಣ್ಣುಮಕ್ಕಳಿಗೆ ಸಂಸ್ಕಾರ ಕಳಿಸುವುದು ಬಹು ಮುಖ್ಯ ನಮ್ಮ ಸ್ವಾರ್ಥ ಬಿಟ್ಟು ಕೆಲಸ ಮಾಡಿದರೆ ಸಮಾಜಕ್ಕೆ ಒಂದಷ್ಟು ಕೊಡುಗೆ ಕೊಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕವಿ ಹೆಚ್ .ಎಸ್ . ವೆಂಕಟೇಶ ಮೂರ್ತಿ ಸುಂದರ ಪ್ರಕಾಶನದ ಇಂದಿರಾ ಸುಂದರ್. ಲೇಖಕಿ ಭಾರತಿ ಹೆಗಡೆ , ಲೇಖಕಿ ಮಧುಬಾಲ ಬಿ. ಲಿಗಾಡೆ, ಲೇಖಕ ವಿಮರ್ಶಕ  ಸತ್ಯನಾರಾಯಣ ಕೆ . ಪತ್ರಕರ್ತೆ ಪೂರ್ಣಿಮ , ಅವರು ಭಾಗವಹಿಸಿದ್ದರು .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
31125

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು