ಬೆಂಗಳೂರು

ಬೆಂಗಳೂರು: ವಿಶಿಷ್ಟ ಕಲಾಕೃತಿ, ಆಭರಣಗಳ ಪ್ರದರ್ಶನ ಆರಂಭ

ಬೆಂಗಳೂರು: ಭಾರತದ ಉತ್ತಮ ಫ್ಯಾಷನ್ ಪ್ರಿಯರ ವಿಶಿಷ್ಟ ವಸ್ತ್ರಾಭರಣಗಳ ಸಂಗ್ರಹಗಳ ಪ್ರದರ್ಶನ ಹೈ ಲೈಫ್ ನಿಂದ ಫೆ.11 ರವರೆಗೆ ಲಲಿತ  ಅಶೋಕ್ ಹೋಟೆಲ್ ನಲ್ಲಿ ಆಯೋಜಿಸಲಾಗಿದೆ.

ವಿನೂತನ ವಿನ್ಯಾಸದ ವಸ್ತ್ರಾಭರಣಗಳ ಪ್ರದರ್ಶನ ಇದಾಗಿದ್ದು, ವಧುವಿನ ಉಡುಗೆ, ವಿನ್ಯಾಸದ ಉಡುಪುಗಳು ಆಭರಣಗಳು, ಫ್ಯಾಶನ್ ಪರಿಕರಗಳು, ಕಲಾಕೃತಿಗಳು ಮತ್ತು ಅಲಂಕಾರಕ ಆಭರಣಗಳ ಪ್ರದರ್ಶನ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.

ಮದುವೆಯ ಉಡುಗೆ, ವಧುವಿನ ಉಡುಗೆ, ವಧುವಿನ ಆಭರಣಗಳು, ಪರಿಕರಗಳು ಮತ್ತು ಹೆಚ್ಚಿನವುಗಳ ಮೋಡಿಮಾಡುವ ಸಂಗ್ರಹವನ್ನು  ಹೊಂದಿರುತ್ತದೆ. ಬ್ರೈಡಲ್ ವೇರ್,ವೆಡ್ಡಿಂಗ್ ಗೌನ್‌ಗಳು, ಬ್ರೈಡಲ್ ವೇರ್‌ನಿಂದ ವಧುವಿನ ಆಭರಣಗಳು ಭಾರತದಾದ್ಯಂತ ಅತ್ಯುತ್ತಮ ಬ್ರಾಂಡ್ ಗಳು ಮತ್ತು ವಿನ್ಯಾಸದ  ವಸ್ತ್ರಾಭರಣಗಳ ಮಾರಾಟ ಮೇಳ ಇದಾಗಿದೆ.

ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ ಚಿನ್ನಾಭರಣಗಳು ಕರಕುಶಲ ವಸ್ತುಗಳು ಹೀಗೆ ಎಲ್ಲಾ  ಅಗತ್ಯಗಳು ಒಂದೇ ಸೂರಿನಡಿ ದೊರೆಯಲಿವೆ. ಫ್ಯಾಷನ್ ಲೋಕದ ಖ್ಯಾತ ವಸ್ತ್ರ ವಿನ್ಯಾಸಕಾರ ಕಲಾತ್ಮಕ ಸಂಗ್ರಹಗಳು, ಮನೆಯ ಅಲಂಕಾರ ಸಂಬಂಧಿತ ವಸ್ತುಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗುತ್ತದೆ.

ಮದುವೆಯ ಉಡುಗೆ, ವಧುವಿನ ಉಡುಗೆ, ವಧುವಿನ ಆಭರಣಗಳು, ಪರಿಕರಗಳು ಮತ್ತು ಹೆಚ್ಚಿನವುಗಳ ಮೋಡಿಮಾಡುವ ಸಂಗ್ರಹವನ್ನು ಹೊಂದಿರುತ್ತದೆ. ಬ್ರೈಡಲ್ ವೇರ್, ವೆಡ್ಡಿಂಗ್ ಗೌನ್‌ಗಳು, ಬ್ರೈಡಲ್ ವೇರ್‌ನಿಂದ ವಧುವಿನ ಆಭರಣಗಳು ಭಾರತದಾದ್ಯಂತ ಅತ್ಯುತ್ತಮ ಬ್ರಾಂಡ್ ಗಳು ಮತ್ತು ವಿನ್ಯಾಸದ ವಸ್ತ್ರಾಭರಣಗಳು ಮಾರಾಟ ಮೇಳದಲ್ಲಿದೆ.

Ashika S

Recent Posts

ಬ್ಯಾಂಕ್ ಗಳು ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಬೇಡಿ: ಡಿಸಿ

ತೀವ್ರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ…

4 hours ago

ಕೇರಳದ 9 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಇಂದಿನಿಂದ ಮುಂದಿನ ಮಂಗಳವಾರದವರೆಗೆ ಕೇರಳದ  ಬಹುತೇಕ ಭಾಗಗಳಲ್ಲಿ  ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

4 hours ago

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ: ಬಾವಲಿ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಆಗಮಿಸುವವರತ್ತ ನಿಗಾವಹಿಸಲಾಗುತ್ತಿದೆ.

4 hours ago

ಬಿರುಗಾಳಿಯೊಂದಿಗೆ ಸುರಿದ ಮಳೆ: ಮಾವು, ಪಪ್ಪಾಯಿ ಬೆಳೆಗೆ ಹಾನಿ

ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಮಾವು ಹಾಗೂ ಪಪ್ಪಾಯಿ ಬೆಳೆಗೆ ಹಾನಿ ಉಂಟಾಗಿದೆ.

5 hours ago

ಚಾಮರಾಜನಗರ: ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವು

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ   ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

5 hours ago

ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್‌ ಪಡೆದು ಬಸ್‌ನಲ್ಲಿ ಸಂಚರಿಸಿದ ನ್ಯಾಯಾಧೀಶ

ನಗರದಿಂದ ಸಿದ್ಧೇಶ್ವರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಬೇಕೆಂಬ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದೆ.

5 hours ago