News Karnataka Kannada
Sunday, April 28 2024
ಬೆಂಗಳೂರು

‘ಸದನದಲ್ಲಿ ಮಕ್ಕಳ ಹಕ್ಕುಗಳ ಚರ್ಚೆಯಾಗಲಿ’

Vidhanaswada 15082021
Photo Credit :
ಬೆಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆಯು ರಾಜಕಾರಣಿಗಳನ್ನು ಮಕ್ಕಳ ಹಕ್ಕುಗಳ ತಜ್ಞರನ್ನಾಗಿ ಮಾಡುವ ಗುರಿ ಹೊಂದಿದೆ.

‘ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (ಕೆಸಿಆರ್ಓ) ಮತ್ತು ಯುನಿಸೆಫ್‌ ಸಹಯೋಗ ಹೊಂದಿರುವ ಈ ವೇದಿಕೆಯು ಶಾಸಕರಿಗಾಗಿ ಮಾಹಿತಿ ಹಂಚಿಕೆ ಸಭೆಗಳನ್ನು ಹಮ್ಮಿಕೊಳ್ಳ ಲಿದ್ದು, ಮಕ್ಕಳ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕ್ಷೇತ್ರ ಭೇಟಿಯನ್ನೂ ಆಯೋಜಿಸಲಿದೆ. ಆಯ್ದ ವಿಚಾರಗಳ ಕುರಿತು ಸರ್ಕಾರದ ನಿಲುವು ಅರಿತುಕೊಂಡು ಪರಿಹಾರ ಕ್ರಮಗಳ ಕುರಿತು ಸಲಹೆ ನೀಡಲಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಮಕ್ಕಳ ಹಕ್ಕುಗಳ ಕುರಿತಾದ ನೀತಿಗಳು ಅಥವಾ ಕಾರ್ಯಕ್ರಮಗಳ ಬಗ್ಗೆ ಸದನದಲ್ಲಿ ಚರ್ಚಿಸುವುದು. ಪ್ರತಿವರ್ಷ ಮಕ್ಕಳು ಮುಖ್ಯಮಂತ್ರಿ ಗಳೊಡನೆ ಸಮಾಲೋಚಿಸಲು ಅನುವಾಗುವಂತೆ ‘ಮಕ್ಕಳ ಹಕ್ಕುಗಳ ಸಂಸತ್’ ಆಯೋಜಿಸುವ ಗುರಿಯನ್ನೂ ಹೊಂದಿದೆ. ಮಕ್ಕಳ ಮತ್ತು ಮಹಿಳೆಯರ ವಿಚಾರಗಳ ಕುರಿತು ಆಸಕ್ತಿಯಿರುವ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೆ ಮುಕ್ತ ಪ್ರವೇಶವಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಮಾಜಿ ಸದಸ್ಯರೂ ಪಾಲ್ಗೊಳ್ಳಬಹುದು’ ಎಂದು ಪ್ರಕಟಣೆ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು