ಬೆಂಗಳೂರು : ಉತ್ತರಾಖಂಡಗೆ ಪ್ರವಾಸಕ್ಕೆ ತೆರಳಿದ್ದಂತ ರಾಜ್ಯದ 96 ಜನರು ಪ್ರವಾಹಕ್ಕೆ ಸಿಲುಕಿದ್ದರು. ಈ ಎಲ್ಲಾ 96 ಜನರು ಸುರಕ್ಷಿತರಾಗಿದ್ದಾರೆ. ಅವರನ್ನು ಶೀಘ್ರವೇ ಮರಳಿ ರಾಜ್ಯಕ್ಕೆ ಕರೆ ತರುವಂತ ವ್ಯವಸ್ಥೆ ಮಾಡಲಾಗುತ್ತದೆ ಎಂಬುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಾಖಂಡಗೆ ಪ್ರವಾಸಕ್ಕೆ ಹೋಗಿ, ಪ್ರವಾಹದಲ್ಲಿ ಸಿಲುಕಿರುವಂತ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿತ್ತು. ಈ ಸಂಖ್ಯೆಗಳಿಗೆ 10 ಜನರು ಕರೆ ಮಾಡಿ ತಿಳಿಸಿದ್ದು, ಅವರು ಸುರಕ್ಷಿತವಾಗಿದ್ದಾರೆ. ಅವರ ಕುಟುಂಬದ ಜೊತೆಗೆ ಚರ್ಚೆ ಮಾಡಿದ್ದೇವೆ ಎಂದರು.
ಹೀಗೆ ಸಂಪರ್ಕಿಸಿದಂತವರು ಬೆಂಗಳೂರಿನಿಂದ ಯಲಹಂಕ, ಪೀಣ್ಯ, ಸಿಂದಗಿ, ಉಡುಪಿ, ರಾಜಾಜಿನಗರ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಕ್ಕೆ ಹೋಗಿದ್ದವರು ಆಗಿದ್ದಾರೆ. ಅವರನ್ನು ಸಹಾಯವಾಣಿಗೆ ಸಂಪರ್ಕಿಸಿದ್ದು, ಸುರಕ್ಷಿತರಾಗಿರೋದಾಗಿ ತಿಳಿಸಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿದ್ದು, ಎಲ್ಲರನ್ನೂ ಕರೆತರುವ ಕೆಲಸ ಮಾಡಲಾಗುತ್ತದೆ ಎಂದರು.