News Karnataka Kannada
Monday, April 29 2024
ಬೆಂಗಳೂರು

ಆರು ಕೋಟಿ ಜನರ ಪರವಾಗಿ ಆ ದಿನ ನಾನು ಅಪ್ಪುಗೆ ಮುತ್ತು ಕೊಟ್ಟಿದ್ದೆ: ಭಾವುಕರಾದ ಸಿಎಂ ಬೊಮ್ಮಾಯಿ

Bommai Rajkumar
Photo Credit :

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾವುಕ ನುಡಿಗಳನ್ನು ಹಂಚಿಕೊಂಡರು.

ಅಂತಿಮ ದರುಶನ ವೇಳೆ ಪುನೀತ್​ ಅವರ ಹಣೆಗೆ ಬಸವರಾಜ ಬೊಮ್ಮಾಯಿ ಮುತ್ತಿಟ್ಟಿದ್ದರು. ಆ ಘಟನೆಯನ್ನು ಇಂದಿನ ಕಾರ್ಯಕ್ರಮದ ವೇದಿಕೆಯಲ್ಲಿ ನೆನಪಿಸಿಕೊಂಡ ಸಿಎಂ, ‘ನಾನು ಮುತ್ತು ಕೊಟ್ಟಾಗ ಬಹಳಷ್ಟು ಜನರು ಬೇರೆ ಬೇರೆ ರೀತಿ ವಿಶ್ಲೇಷಣೆ ಮಾಡಿದ್ದಾರೆ.

ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೋಕೆ ಹೋಗಲ್ಲ. ಅದು ನನ್ನ ಹೃದಯದಿಂದ ಬಂದ ಭಾವನೆ. ಮುತ್ತುರಾಜರ ಮಗನಿಗೆ ಕರ್ನಾಟಕ ರತ್ನವನ್ನು ಕೊಡುವುದು ಎಷ್ಟು ಸಂತೋಷ ಆಗಿದೆಯೋ, ಅದೇ ರೀತಿ ಆರು ಕೋಟಿ ಜನರ ಪರವಾಗಿ ಆ ಮುತ್ತನ್ನು ನಾನು ಕೊಟ್ಟಿದ್ದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪುನೀತ್​ ಅಂತಿಮ ನಮನ ಮತ್ತು ಅಂತಿಮ ಸಂಸ್ಕಾರದ ಸಮಯದಲ್ಲಿ ಸಹಕರಿಸಿದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ, ಸರ್ಕಾರದ ಅಧಿಕಾರಿಗಳಿಗೆ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದಾರೆ.

ಪುನೀತ್​ ಸಮಾಧಿ ಸ್ಥಳವನ್ನು ಡಾ. ರಾಜ್​ಕುಮಾರ್​ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ಅವರ ಸ್ಮಾರಕದ ರೀತಿಯೇ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು