ವಿಜಯಪುರ: ಭಟ್ಕಳದಲ್ಲಿ ಭಯೋತ್ಪಾದನೆ ಜೀವಂತ ಇದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಕೆರೂರ ಗಲಾಟೆ ಪ್ರಕರಣದಲ್ಲಿ ವಿಜಯಪುರದ ದರ್ಗಾ ಜೈಲಿಗೆ ಶಿಫ್ಟ್ ಆಗಿರುವ ಹಿಂದು ಮುಖಂಡರ ಭೇಟಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬುರ್ಖಾದಲ್ಲಿ ಚಾಕು ಹಿಡಿದುಕೊಂಡು ಹಲ್ಲೆ ಮಾಡಿದ್ದು ಖಂಡನೀಯ. ಅಲ್ಲದೇ, ಮುಸ್ಲಿಂ ಕಿಡಿಗೇಡಿಗಳ ಪುಂಡಾಟಿಕೆ ಇನ್ನು ನಡೆಯೋದಿಲ್ಲ. ಹಿಂದೂ ಸಮಾಜ ಜಾಗೃತಿಯಾಗಿದೆ.
ಗಲಭೆ, ಕೊಲೆ, ಹಿಂದೂಗಳನ್ನ ಕೆಣಕೋದು ಇನ್ನು ನಡೆಯೊಲ್ಲ ಇದಕ್ಕೆ ಹಿಂದೂ ಸಮಾಜ ಉತ್ತರ ಕೊಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ. ನಮ್ಮಂಥ ಹೋರಾಟಗಾರರಿಗೆ ರಾಜಕೀಯದಲ್ಲಿ ಅವಕಾಶ ಇಲ್ಲ ಎಂದರು.