ವಿಜಯಪುರ: ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಉಪನೋಂದಣಾಧಿಕಾರಿಗಳ (ಸಬ್ರಿಜಿಸ್ಟರ್) ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿ ದಾಖಲಾತಿ ಹಾಗೂ ಹಣ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಅರುಣ್ ನಾಯಕ್ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದು, ದಾಳಿ ವೇಳೆ ಅನಧಿಕೃತ ಜನರು (ಏಜೆಂಟರು) ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದ್ದು, ನಾಲ್ಕಾರು ಜನರನ್ನು ವಶಕ್ಕೆ ಪಡೆದು
ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಅಲ್ಲದೆ ದಿನಚರಿ ಪುಸ್ತಕ ಹಾಗೂ ಇನ್ನಿತರ ದಾಖಲಾತಿಗಳ ಪರಿಶೀಲನೆ ನಡೆಸಿದ್ದು ಅದರಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದೆ, ಹೆಚ್ಚಿನ ಹಣ ಕೇಳಿದರೆ ಕೂಡಲೆ ಲೋಕಾಯುಕ್ತ ಕಚೇರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಸಾರ್ವಜನಿಕರು, ಯಾರಿಗೂ ಲಂಚ ನೀಡಬಾರದು. ಲಂಚ ಕೇಳಿದರೆ ಒಂದು ದಿನ ಸಮಯ ತೆಗೆದುಕೊಂಡು ನಮಗೆ ಮಾಹಿತಿ ತಿಳಿಸಿದರೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಲೋಕಾಯುಕ್ತ ಅಧಿಕಾರಿ ಅರುಣ್ ನಾಯಕ್ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐ ಆನಂದ ಟಕ್ಕಣ್ಣವರ, ಪಿಎಸೈ ಆನಂದ ದೋಣಿ, ಸಿಬ್ಬಂದಿಗಳಾದ ಜಿ.ಎ ಹಡಪದ ಎ.ಜಿ ಪಡಶೆಟ್ಟಿ, ಎಸ್. ಐ. ಅಮರಖೇಡ, ಎಸ್.ಟಿ. ಖಟ್ಟಿ, ಎಂ.ಜೆ. ರಜಪೂತ, ಎ.ಎಂ. ಗೋಲಗೇರಿ, ಸಂತೋಷ ಚವ್ಹಾಣ, ಎಂ.ಎಸ್. ಸಲಗೊಂಡ, ಎ.ಎಂ. ಅಕ್ಕಲಕೋಟ ದಾಳಿಯಲ್ಲಿ ಪಾಲ್ಗೊಂಡಿದ್ದರು.