ವಿಜಯಪುರ: ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಬಸವನಗೌಡ ಪಾಟೀಲ್ ಯತ್ನಳ್ ಕರ್ನಾಟಕದ ಗೆಲುವು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಯಾವ ‘ಯಪ್ಪ’ನಿಂದಲೂ ಸಾಧ್ಯವಿಲ್ಲ. ಇವರ ಮುಖ ನೋಡಿ ಯಾರೂ ವೋಟ್ ಹಾಕಲ್ಲ ಎಂದರು.
ಮಾಧ್ಯಮಗಳ ಜೊತೆ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಳ್, ನಾನು ದೆಹಲಿಗೆ ಯಾರ ಭೇಟಿಗೂ ಹೋಗಿಲ್ಲ. ನಾನು ಯಾರ ಅಪೈಂಟ್ಮೆಂಟ್ ಕೇಳಿಲ್ಲ, ನನಗೆ ಯಾರ ಅಪೈಂಟ್ಮೆಂಟ್ ಅವಶ್ಯಕತೆ ಇಲ್ಲ ನಾನು ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಕಾರ್ಖಾನೆ ಕೆಲಸಕ್ಕೆ ಹೋಗಿದ್ದೆ. ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ ಹಾಗೂ ಇತರೆ ಕೆಲ ಸಂಸದರನ್ನು ಭೇಟಿಯಾಗಿದ್ದೇನೆ ಎಂದರು.
ನನ್ನ ಹೋರಾಟ ವಂಶವಾರು, ಭ್ರಷ್ಟಾಚಾರ ಹಾಗೂ ಅಡ್ಜೆಸ್ಟಮೆಂಟ್ ಈ ಮೂರರ ವಿರುದ್ಧ ನನಗೆ ಯಾರೋ ಬೈದಿಲ್ಲ ಎಚ್ಚರಿಕೆಯನ್ನು ನೀಡಿಲ್ಲ. ಗಂಭೀರವಾದ ಎಚ್ಚರಿಕೆಯನ್ನು ಯಾವನೂ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಾದಿ ಬೀದಿಯಲ್ಲಿರುವವರ ಹೇಳಿಕೆ ಕುರಿತು ಉತ್ತರಿಸುವಷ್ಟು ಲೋ ಲೆವಲ್ ರಾಜಕಾರಣಿಯಲ್ಲ. ಒಂದಷ್ಟು ಸ್ಟೇಟಸ್ ಇದ್ದವರ ಬಗ್ಗೆ ಕೇಳಿ. ಯಾವನೋ ಒಬ್ಬ ಹುಚ್ಚ ಎನ್ನುತ್ತಾನೆ. ಮತ್ತೋರ್ವ ಉತ್ತರ ಕುಮಾರ ಎನ್ನುತ್ತಾನೆ, ಮತ್ತೆ ಆತನೇ ಯತ್ನಾಳ್ ನಮ್ಮ ಪಕ್ಷದ ಆಸ್ತಿ ಎನ್ನುತ್ತಾನೆ. ನಾನು ಯಾರಿಗೂ ಐ ಡೋಂಟ್ ಕೇರ್ ಎಂದು ತಿರುಗೇಟು ನೀಡಿದರು.