ತಾಳಿಕೋಟೆ : ರೆಡ್ಡಿ ಸಮುದಾಯ ರಾಜ್ಯ ರಾಜಕಾರಣದಲ್ಲಿ ಗುರುತಿಸಿ ಕೊಂಡಿದೆ. ಅದು ಯಾವ ರೀತಿ ಎಂದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಮೊದಲ ಬಾರಿಗೆ ಅಧಿ ಕಾರ ಹಿಡಿದಿದ್ದೇ ರೆಡ್ಡಿಗಳಿಂದ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ರೆಡ್ಡಿ ಸಮಾಜ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವುದಷ್ಟೇ ಅಲ್ಲ, ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದು ರೆಡ್ಡಿಗಳಿಂದ. ರೆಡ್ಡಿ ಜನಾಂಗದವರು ಯಾವುದೇ ಕೆಲಸ ಹಿಡಿದರೂ ದಡ ಮುಟ್ಟುವವರೆಗೂ ಬಿಡುವವರಲ್ಲ ಎಂದರು.