ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಗಳಲ್ಲಿ ಬಿಜೆಪಿಯ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸಿದ್ದು, ಬೆಲೆ ಏರಿಕೆ ಮತ್ತು ಜನ ವಿರೋಧಿ ನೀತಿ ಅನುಸರಿಸಿದ
ಪರಿಣಾಮವಾಗಿ ಹಣದ ಹೊಳೆ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡರೂ, ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ನೀತಿ
ನಿಜಕ್ಕೂ ಶ್ಲಾಘನೀಯ. ಮುಖ್ಯ ಮಂತ್ರಿಗಳು ಪ್ರತಿ ಬೂತ್ಗಳನ್ನು ಭೇಟಿ ನೀಡಿ, ಡಜನ್ ಮಂತ್ರಿಗಳು ಎಲ್ಲಾ ಅಸಂವಿಧಾನಿಕ ವ್ಯವಹಾರ ನಡೆಸಿದರೂ, ಜನರು
ಬಿಜೆಪಿಯನ್ನು ಸೋಲಿಸಬೇಕೆಂಬ ತೀರ್ಮಾನ ಕೈಗೊಂಡಿರುವುದು ಚುನಾವಣೆಯಲ್ಲಿ ಸ್ಪಷ್ಟಗೊಂಡಿದೆ.
ಬಿಜೆಪಿ ಈ ಸೋಲಿನಿಂದ ಆದರೂ ಪಾಠ ಕಲಿತು, ಕೂಡಲೇ ೭ ವರ್ಷಗಳಲ್ಲಿ ರೂ.೬೫ ಪೆಟ್ರೋಲ್ ಬೆಲೆ, ರೂ.೬೦ ಡೀಸೆಲ್ ಮತ್ತು ೬೫೦ರೂ.ಅನಿಲ ಇಂಧನಕ್ಕೆ ಏರಿಸಿದ ಕ್ರಮವನ್ನು ಜನರು ವಿರೋಧಿಸುತ್ತಾರೆ ಎಂದು ತಿಳಿದುಕೊಳ್ಳಲು ಸೂಕ್ತ ಸಮಯ ಎಂದು ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜರವರು ಅಭಿಪ್ರಾಯಪಟ್ಟಿದ್ದಾರೆ.
ದೇಶದ್ಯಾದಂತ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ರಾಷ್ಟ ಮತ್ತು ರಾಜ್ಯದಲ್ಲಿ ಜನರು ಬದಲಾವಣೆ ಬಯಸಿದ್ದಾರೆ ಎಂದು ಸೂಚನೆ ನೀಡಿದ್ದು, ೨೦೨೦-೨೩ರ ಉಪ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವ ಮುನ್ಸೂಚನೆ ನೀಡಿದ್ದು, ಕಾಂಗ್ರೆಸ್ ಪರ ನೀಡಿದ ಮತಗಳಿಗೆ, ಹಾನಗಲ್ ಮತ್ತು ಸಿಂಧಗಿ ಮತದಾರರನ್ನು ಐವನ್ ಡಿ ಸೋಜರವರು ಅಭಿನಂದಿಸಿದ್ದಾರೆ