ಬೆಳಗಾವಿ: ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಎಥೆನಾಲ್ ಉತ್ಪಾದನೆಗೆ ಮಹತ್ವ ನೀಡಬೇಕು ಎಂದು ಕೇಂದ್ರ ರಸ್ತೆ ಹಾಗು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಗರದಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆ ಮಾಡಿ ೧೮ ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ʼಈಗಾಗಲೇ ಪ್ರಕೃತಿಪ್ರಿಯ ಇಂಧನವಾದ ಎಥೆನಾಲ್ ಬಳಕೆ ಶುರುವಾಗಿದ್ದು ಕೇಂದ್ರ ಸರ್ಕಾರ ಎಥೆನಾಲ್ ಪಂಪ್ಗಳ ಸ್ಥಾಪನೆಗೆ ಒಪ್ಪಿಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಭಾರತ ಜಗತ್ತಿಗೆ ಅತಿ ಹೆಚ್ಚು ಎಥೆನಾಲ್ ಸರಬರಾಜು ಮಾಡುವ ದೇಶವಾಗಲಿದೆʼ ಎಂದರು.
ನಾನು ಎಥೆನಾಲ್ ಬಳಸುವ ಕಾರನ್ನೇ ಬಳಸುತ್ತೇನೆ ಎಂದ ಗಡ್ಕರಿ, ಜಿಲ್ಲೆಯ ರೈತರು ಎಥೆನಾಲ್ ಉತ್ಪಾದನೆಯತ್ತ ಗಮನ ಹರಿಸಬೇಕಿದ್ದು, ರಾಜ್ಯ ಸರ್ಕಾರ ಅದಕ್ಕೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಅವರು ಸಚಿವ ಸತೀಶ್ ಜಾರಕಿಹೊಳಿಗೆ ಸೂಚಿಸಿದರು.
ʼರೈತರು ಅನ್ನದಾತರಷ್ಟೇ ಅಲ್ಲ, ಉದ್ಯೋಗ ದಾತರೂ, ವಿದ್ಯುತ್ ಉತ್ಪಾದಕರೂ ಆಗಲಿದ್ದಾರೆ. ಕಾರಣ ಎತೆನಾಲ್ ಹಾಗು ವಿಮಾನ ಇಂಧನಗಳ ಉತ್ಪಾದನೆಯ ಮೂಲ ರೈತರಾಗಿದ್ದಾರೆʼ ಎಂದ ಅವರು, ಬೆಳಗಾವಿ ವಿಮಾನ ಇಂಧನ ಕೇಂದ್ರವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.