ಗದಗ: ಗದಗ ಜಿಲ್ಲೆ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ 65-ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸುಜಾತಾ ದೊಡ್ಡಮನಿ ಹಾಗೂ ಮಾಜಿ ಶಾಸಕರಾದ ಜಿ ಎಸ್ ಗಡ್ಡದೇವರಮಠರವರ ನೇತೃತ್ವದಲ್ಲಿ ಇಂದು ಗೋವನಾಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಗ್ರಾಮದ ಹಿರಿಯರ, ಪಕ್ಷದ ಪದಾಧಿಕಾರಿಗಳ, ಕಾರ್ಯಕರ್ತರ ಸಮ್ಮುಖದಲ್ಲಿ ಸಭೆ ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಗುರುತಿಗೆ ಮತ ಚಲಾಯಿಸುವಂತೆ ಗೋವನಾಳ ಗ್ರಾಮದ ಹಿರಿಯರಲ್ಲಿ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡರು.
ಈ ವೇಳೆ ಲಕ್ಷ್ಮೇಶ್ವರ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಗೋವನಾಳ ಗ್ರಾಮದ ಗಣ್ಯಮಾನ್ಯರು ಹಿರಿಯ ಮುಖಂಡರು, ಪಕ್ಷದ ಪ್ರಮುಖರು ಕಾರ್ಯಕರ್ತರು ಈ ಸಭೆಯಲ್ಲಿ ಉಪಸ್ಥಿತರಿದ್ದರು.