ಹುಬ್ಬಳ್ಳಿ: ಭೂತಾರಾಧನೆ, ದೈವಾರಾಧನೆ ಕರಾವಳಿ ಜನರ ನಂಬಿಕೆ, ಪದ್ಧತಿಯಾಗಿದ್ದು ನಮ್ಮ ಭಾವನೆ, ಪದ್ಧತಿ ಬಗ್ಗೆ ಯಾರು ಹಗುರವಾಗಿ ಮಾತನಾಡಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂತಾರ’ ಸಿನೆಮಾ ಬಗ್ಗೆ ಏನಾದರೂ ವಿಮರ್ಶೆ ಮಾಡಲಿ ಆದರೆ, ಕರಾವಳಿ, ಕೇರಳದಲ್ಲಿ ಆಚರಣೆ ಮಾಡುವ ಭೂತಾರಾಧನೆ, ದೈವಾರಾಧನೆ ಪ್ರಶ್ನಿಸುವ, ಹಗುರವಾಗಿ ಮಾತನಡುವುದು ಸರಿಯಲ್ಲ ಎಂದರು.
ರಾಹುಲ್ ಗಾಂಧಿ ಅವರ ‘ಭಾರತ ಜೋಡೋ’ ಯಾತ್ರೆ ದೇಶದಲ್ಲಿ ಅಲ್ಲ, ಕಾಂಗ್ರೆಸ್ ಕಾರಣದಿಂದಾಗಿ ದೇಶದ ಭಾಗ ಪಾಕಿಸ್ಥಾನ, ಚೀನಾದ ಪಾಲಾಗಿದೆಯೋ ಅಲ್ಲಿ ಹೋಗಿ ಯಾತ್ರೆ ಮಾಡಲಿ. ದೇಶ ವಿಭಜನೆಗೂ ಕಾಂಗ್ರೆಸ್ ನೀತಿ ಕಾರಣ ಎಂದು ಆರೋಪಿಸಿದರು.
ಚಿತ್ರ ನಟ ಚೇತನ್ ಅಹಿಂಸಾ ‘ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ’ ಎಂದು ಹೇಳಿಕೆ ನೀಡಿ ಭಾರಿ ಚರ್ಚೆಗೆ ಅವಕಾಶ ಮಾಡಿದ್ದರು. ಈ ಬಗ್ಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಈ ಕುರಿತು ಸಚಿವೆ ಶೋಭಾ ಪ್ರತಿಕ್ರಿಯಿಸಿದರು.