ಹುಬ್ಬಳ್ಳಿ: ಮಳೆ ಹೋಯಿತು ಎಂದು ಆತಂಕಗೊಂಡಿದ್ದ ಜನರಿಗೆ ವರುಣನ ಆಗಮನ ಖುಷಿ ತಂದಿದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವರುಣನ ಆಗಮನವಾಗಿದ್ದು, ಜನರ ಮನಸ್ಸಿನಲ್ಲಿ ಮಂದಹಾಸ ಮೂಡಿದಂತಾಗಿದೆ.
ಮೋಡ ಕವಿದ ವಾತಾವರಣದ ಬೆನ್ನಲ್ಲೇ ವರುಣನ ಆಗಮನವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಬೀಜ ಗೊಬ್ಬರ ಹಾಕಿದ್ದ ಅನ್ನದಾತನ ಬಾಳಲ್ಲಿ ಮತ್ತೇ ಆಶಾ ಭಾವ ಚಿಗುರೊಡೆದಿದೆ. ಇನ್ನೂ ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮಳೆ ಇಲ್ಲ ಎಂದು ಹೊರಬಂದಿದ್ದ ಜನರು ಅವರಸದಲ್ಲಿಯೇ ಮನೆ ಸೇರುವಂತಾಗಿದೆ.