ಕುಂದಗೋಳ: ಎಸ್.ಐ.ಚಿಕ್ಕನಗೌಡರ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕುಕ್ಕರ್ ಚಿಹ್ನೆ ಮೂಲಕ ಮತದಾರರ ಬಳಿ ಮರಳಿದ್ದಾರೆ. ಸದ್ಯ ಎಸ್.ಐ.ಚಿಕ್ಕನಗೌಡರ ಪ್ರಚಾರ ನಡೆಸಿದ ಊರೆಲ್ಲೆಲ್ಲಾ ಸ್ವತಃ ಗ್ರಾಮಸ್ಥರೇ ಜೆಸಿಬಿ ಯಂತ್ರದ ಮೂಲಕ ಹೂಮಳೆ ಸುರಿಸಿ ಸನ್ಮಾನ ಗೌರವ ನೀಡಿ ಸ್ವಾಗತಿಸಿದರು.
ಎಸ್.ಐ.ಚಿಕ್ಕನಗೌಡರ ತಾವು ನಿಷ್ಪಕ್ಷಪಾತವಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಚಿತ್ರಣ ಜನರಿಗೆ ತೋರಿಸಿ ಮತ ಕೇಳ್ತಾ ಇದ್ದಾರೆ. ಸ್ವಾಭಿಮಾನದ ಅಲೆಯಲ್ಲಿ ಮತ್ತೊಮ್ಮೆ ಜನರ ಆಶೀರ್ವಾದ ಕೇಳುತ್ತಿರುವ ಚಿಕ್ಕನಗೌಡರ ಮಂಗಳವಾರ ರೇವಡಿಹಾಳ, ದೇವರಗುಡಿಹಾಳ, ಪರಸಾಪುರ, ಗಂಗಿವಾಳ, ತಿಮ್ಮಸಾಗರ, ಚನ್ನಾಪೂರ, ರಾಮಾಪೂರ, ಅಂಚಟಗೇರಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಡೆಸಿ ಜನರ ಮಡಿಲಿಗೆ ಅಭಿವೃದ್ಧಿ ಭರವಸೆ ತುಂಬಿ ಮತ ಕೇಳಿದ್ದಾರೆ.
ಪಕ್ಷೇತರನಾದರೂ ಸಹ ಯಾವ ರಾಷ್ಟ್ರೀಯ ಪಕ್ಷಕ್ಕಿಂತ ಕಡಿಮೆ ಇರದ ವರ್ಚಸ್ಸು, ರೋಡ್ ಶೋ, ಜನಬೆಂಬಲ, ಎಲ್ಲದಕ್ಕಿಂತ ಮಿಗಿಲಾಗಿ ನಿತ್ಯ ಭೇಟಿ ಕೊಟ್ಟ ಹಳ್ಳಿಗಳಲ್ಲಿ ನಿತ್ಯ ಹೊಸ ಹೊಸ ಕಾರ್ಯಕರ್ತರು ಸಾಲಾಗಿ ಬಂದು ಕುಕ್ಕರ್’ಗೆ ಬೆಂಬಲ ನೀಡುತ್ತಲಿರುವುದು ಗೌಡರ ಮುಖದಲ್ಲಿ ಗೆಲುವಿನ ಕಳೆ ತಂದಿದೆ.
ಕೆಎಸ್ಆರ್ಟಿಸಿ ಬಸ್ವೊಂದರ ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…
ದೆಹಲಿಯ ಮೆಟ್ರೋ ದಲ್ಲಿ ರೊಮ್ಯಾನ್ಸ್ ನಡೆಸುವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದ್ದವು. ಆದರೆ ಇದೀಗ ಬೆಂಗಳೂರಿನಲ್ಲೂ ಇದೇ ಚಾಳಿ ಪ್ರಾರಂಭವಾಗಿದ್ದು,…
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ಎನ್ಆರ್ ಪುರ ತಾಲೂಕಿನ ಕರಗುಂದ ಗ್ರಾಮದ ಬಳಿ…
ಅಕ್ರಮವಾಗಿ ಸಾರಾಯಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯಿಂದ ಭರ್ಜರಿ ಕಾರ್ಯಚರಣೆ ನಡೆಸಿದ್ದು, ಮತದಾರರಿಗೆ ಹಂಚಲು ತಂದಿದ್ದ 4.40 ಲಕ್ಷ ರೂಪಾಯಿ…
ಚಾಲಕನ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಚರಂಡಿಗೆ ಪಲ್ಟಿಯಾಗಿ, ಡಿಕ್ಕಿ ರಭಸಕ್ಕೆ ಕಾರು ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರು ವೃದ್ಧರು ಸ್ಥಳದಲ್ಲೇ…
ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಇದೀಗ ಫುಲ್ ಜೋಶ್ನಲ್ಲಿದೆ. ಹ್ಯಾಟ್ರಿಕ್ ಗೆಲುವಿನಿಂದ ತಂಡದಲ್ಲಿ ಹೊಸ ಹುರುಪು ಬಂದಿದೆ.…