ಹುಬ್ಬಳ್ಳಿ: ಹುಬ್ಬಳ್ಳಿಗೆ ಸಿನಿಮಾ ಪ್ರಚಾರಕ್ಕೆ ಬರ್ತಿದ್ವಿ ಆದ್ರೆ ಇಂತಹ ಸಾವಿಗೆ ಬರೋ ಪರಿಸ್ಥಿತಿ ಬಂದಿದೆ. ಇದರಿಂದ ತುಂಬಾ ನೋವಾಗ್ತಿದೆ. ಇಡೀ ದೇಶವೇ ದುಃಖ ಪಡುವಂತಾಗಿದೆ. ಈ ಭಾಗದ ಎಂಪಿ ಪ್ರಹ್ಲಾದ್ ಜೋಶಿ ಸಾಹೇಬ್ರೆ ನೀವು ಭಕ್ತ ಪ್ರಹ್ಲಾದ್ ಆಗಬಾರದು ಉಗ್ರ ನರಸಿಂಹ ತರ ಆಗಬೇಕು ಇಲ್ಲವಾದ್ರೆ ಹಿರಣ್ಯ ಕಷ್ಯಪ್ಪ ತರ ಬಲಿಯಾಗಿ ಬಿಡ್ತೇವಿ ಎಂದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷ ಅಧಿಕಾರದಲ್ಲಿದ್ದೀರಿ ಸಾಧ್ಯವಾದರೆ ಒಂದು ಕಠಿಣ ಕಾನೂನು ತರಬೇಕಾಗಿದೆ. ರಾಜಕೀಯ ನಾಯಕರು ನೀವು ಹೇಳೋ ಹೇಳಿಕೆ ನೇಹಾ ಕುಟುಂಬಕ್ಕೆ ತುಂಬಾ ನೋವು ಉಂಟು ಮಾಡುತ್ತಿದೆ.
ಫಾಸ್ಟ್ ಟ್ರಾಕ್ ಕೋರ್ಟ್ ಈ ಕೇಸ್ ಬರಬೇಕು ಬೇಗನೇ ಆರೋಪಿಗೆ ಶಿಕ್ಷೆಯಾಗಬೇಕು. ಅಂದಾಗ ಮಾತ್ರ ನೇಹಾ ಕುಟುಂಬಕ್ಕೆ ನ್ಯಾಯ ಸಿಗುತ್ತೆ. ಫೈಯಾಜ್ ಮಾಡಿದ್ದು ಅಚಾನಕ್ ಕೃತ್ಯವಲ್ಲ, ಬಲವಂತವಾಗಿ ಬಂದು ಒಂಬತ್ತು ಬಾರಿ ಚಾಕು ಇರಿದ್ದಿದ್ದಾನೆ ಎಂದರು.
ಫೈಯಾಜ್ ತಾಯಿ ಹೇಳ್ತಾರೆ ನನ್ನ ಮಗ ಅಂತವನಲ್ಲಾ ಅಂತ. ನೀವು ಒಬ್ಬರು ಶಿಕ್ಷಕರಾಗಿ ನಿಮ್ಮ ಮಗನಿಗೆ ಹೇಳಿಕೊಟ್ಟಿದ್ದು ಇದೇನಾ? ಫೈಯಾಜ್ ಪೋಷಕರು ಮೇಲೆ ಆಕ್ರೋಶ ವ್ಯಕ್ತಪಡಿಸಿದ ನಟ ಪ್ರಥಮ್.
ಮುಸ್ಲಿಂ ಸಮುದಾಯದವರು ಇಂತಹ ಅಯೋಗ್ಯರನ್ನ ಮಟ್ಟಹಾಕುವ ಕೆಲಸ ಮಾಡಬೇಕು. ಯಾರು ಅವನ ಪರ ವಕಾಲತ್ತು ವಹಿಸಿಕೊಳ್ಳಬಾರದು. ನಿಮ್ಮ ಧರ್ಮದಲ್ಲಿ ಮದುವೆಯಾಗಿ ಖುಷಿಯಾಗಿರಿ. ನಿಮಗ್ಯಾಕೇ ಹಿಂದೂಗಳ ಸಹವಾಸಬೇಕು.? ನಿಮ್ಮ ಸಮುದಾಯದಲ್ಲಿ ಹತ್ತು ಮದುವೆಯಾಗಿ ನಿಮ್ಮನ್ನ ಯಾರು ಕೇಳ್ತಾರೆ. ನಮ್ಮ ಹಿಂದೂಗಳ ತಂಟೆಗೆ ಬರಬೇಡಿ ಇದು ಸರಿ ಇರೋದಿಲ್ಲಾ ಎಂದರು.
ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ…
ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್ಫ್ಲಿಕ್ಸ್ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…
ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…
ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…
ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…
ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಇಂದು ಸಂಭವಿಸಿದೆ