ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗದಿಂದ ಮಹಾಶಿವರಾತ್ರಿ ದಿನವಾದ ಇಂದಿನಿಂದ ಪ್ರತಿದಿನ ವಿಜಯನಗರ ಜಿಲ್ಲೆಯ ಪಂಚಪೀಠದ ಉಜ್ಜಯಿನಿ ಶ್ರೀ ಕ್ಷೇತ್ರಕ್ಕೆ ಸರಕಾರಿ ಬಸ್ ಸೇವೆ ಪ್ರಾರಂಭಿಸಿತು.
ಈ ಬಸ್ ಪ್ರತಿದಿನ ಬೆಳಗ್ಗೆ 7: 15ಕ್ಕೆ ಧಾರವಾಡದಿಂದ ಹೊರಟು ಮಧ್ಯಾಹ್ನ 12: 30ಕ್ಕೆ ಉಜ್ಜಯಿನಿ ತಲುಪಲಿದೆ.ಧಾರವಾಡ ಸಂಘ, ಸಂಸ್ಥೆಗಳ, ಭಕ್ತರ ಬಹುದಿನಗಳ ಬೇಡಿಕೆಗೆ ಅನುಸಾರವಾಗಿ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡರ ಅವರು ಬಸ್ ಗೆ ಚಾಲನೆ ನೀಡಿದರು.