News Karnataka Kannada
Saturday, April 27 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ

Karate
Photo Credit :

ಹುಬ್ಬಳ್ಳಿ: ಕ್ರೀಡೆಯಲ್ಲಿ ಸೋಲು- ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದು ಸ್ವರ್ಣ ಗ್ರುಪ್ ಆಫ್‌ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶನ ವಿ.ಎಸ್‌.ವಿ. ಪ್ರಸಾದ್ ಹೇಳಿದರು. ಚೈತನ್ಯ ಸ್ಪೋರ್ಟ್ಸ್‌ ಫೌಂಡೇಷನ್‌ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರಮಟ್ಟದ ಮಕ್ತ ಕರಾಟೆ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಭಾಗಹಿವುಸುವುದೇ ಮೊದಲ ಸಾಧನೆ. ಗೆದ್ದಾಗ ಬೀಗದಿರಿ, ಸೋತಾಗ ಕುಗ್ಗದಿರಿ ಎಂದು ಹೇಳಿದರು.

ಜೀವನದಲ್ಲಿ ದೊಡ್ಡ ಗುರಿ ಸಾಧಿಸುವ ಹಂಬಲ ಇರಲಿ, ಸತತ ಪರಿಶ್ರಮದ ಮೂಲಕ ಅದರ ಸಾಧನೆಗೆ ಪ್ರಯತ್ನಿಸಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಅಬ್ದುಲ್ ಕಲಾಂ, ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಲಿ. ಹುಬ್ಬಳ್ಳಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಿದರೆ, ಅದಕ್ಕೆ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಖಿಲ ಭಾರತ ಶಿಕ್ಷಕರ ಸಂಘಟನೆಯ ಉಪಾಧ್ಯಕ್ಷ ಬಸವರಾಜ ಗುರಿಕಾರ, ಹಿರಿಯ ಕರಾಟೆ ತರಬೇತುದಾರ ಶ್ರೀಕಾಂತ್ ಮಲ್ಲೂರ್, ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ವಿಶ್ವನಾಥ ಪಾಟೀಲ, ಸಂಘಟಕ ದುರ್ಗಾನಂದ ಇದ್ದರು.

ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಕಾರ್ಗಿಲ್ ಹೋರಾಟದ ಕ್ಷಣಗಳನ್ನು ನೆನಪು ಮಾಡಿಕೊಂಡರು. ‘ಭಾರತದ ಭೂಪ್ರದೇಶವನ್ನು ಪಾಕಿಸ್ತಾನ ಸೈನಿಕರು ಆಕ್ರಮಿಸಿಕೊಂಡಿದ್ದಾರೆ ಎಂದು ಗೊತ್ತಾದ ತಕ್ಷಣ ಕಾರ್ಯಾಚರಣೆ ಆರಂಭವಾಯಿತು. ಆರಂಭದಲ್ಲಿ ಸತತ 60 ಗಂಟೆಗಳ ಕಾಲ ಶತ್ರುಗಳ ವಿರುದ್ಧ ಯುದ್ಧ ನಡೆಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ಎಸೆದ ಹ್ಯಾಂಡ್ ಗ್ರೆನೇಡ್‌ ಒಂದು ನನ್ನ ಪಕ್ಕದಲ್ಲೇ ಬಂದು ಬಿತ್ತು, ಕ್ಷಣಾರ್ಧದಲ್ಲೇ ಅದನ್ನು ಎತ್ತಿ ದೂರಕ್ಕೆ ಎಸೆದೆ. ಬಂಡೆಗೆ ಬಡಿದ ಗ್ರೆನೇಡ್ ಮತ್ತೆ ನನ್ನ ಸಮೀಕದಲ್ಲೇ ಬಂದು ಸ್ಫೋಟಿಸಿದ ಪರಿಣಾಮ ತೀವ್ರತರದ ಗಾಯಗಳಾದವು’ ಎಂದು ತಿಳಿಸಿದರು.

‘ಗ್ರೆನೇಡ್ ಪಕ್ಕದಲ್ಲೇ ಬಿದ್ದಾಗ ಸಾವು ಖಚಿತ ಎಂದುಕೊಂಡೆ. ಸಾವಂತೂ ಖಚಿತ, ಆದರೆ ಮುಖಕ್ಕೆ ಗಾಯವಾಗದಿರಲಿ, ನನ್ನ ತಂದೆ- ತಾಯಿ ಅಂತಿಮ ದರ್ಶನ ಪಡೆಯಲಿ ಎಂದು ಮನಸ್ಸಿನಲ್ಲೇ ದೇವರನ್ನು ಬೇಡಿಕೊಂಡೆ ಎಂದರು. ಸೇನಾನಿಯ ಸಾಹಸದ ಕಥೆ ಕೇಳಿದ ಕರಾಟೆ ಪಟುಗಳು, ಸಭಿಕರು ಎದ್ದುನಿಂತು ಚಪ್ಪಾಳೆ ಹೊಡೆದರು. ಜೈಕಾರ ಕೂಗಿದರು. ತಮ್ಮ ಕಾಲಿಗಾದ ಗಾಯವನ್ನು ಆಯೋಜಕರ ಒತ್ತಾಯದ ಮೇರೆಗೆ ನವೀನ್ ಅವರು ತೋರಿಸಿದಾಗ ಜೈಕಾರ ಮುಗಿಲುಮುಟ್ಟಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು