ಹುಬ್ಬಳ್ಳಿ : ಬಿಜೆಪಿ ಸೇರುವ ಯೋಚನೆಯೇ ಇರಲಿಲ್ಲ. ಆದರೆ ಅನಿವಾರ್ಯ ಸಂದರ್ಭಗಳು ಮತ್ತು ಚುನಾವಣೆಗೆ ಮುನ್ನ ನನ್ನ ಮತದಾರರ ಪ್ರತಿಕ್ರಿಯೆ ನನ್ನ ಮನಸ್ಸನ್ನು ಬದಲಾಯಿಸುವಂತೆ ಮಾಡಿತು. ಬಿಜೆಪಿ ಸೇರ್ಪಡೆಯಿಂದ ದೀರ್ಘಾವಧಿ ರಾಜಕೀಯ ಲಾಭದ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಯಾಗುವ ಹಾಗೂ ವಿಧಾನ ಪರಿಷತ್ತಿನ ಪ.ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಮಾತನಾಡಿದರು.
ಮಂಗಳವಾರವಷ್ಟೇ ಹೊರಟ್ಟಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಮೂಲಕ ಬಿಜೆಪಿ ಸೇರ್ಪಡೆ ಕುರಿತು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಪಕ್ಷದಲ್ಲಿ ಗೌರವಾನ್ವಿತ ಸ್ಥಾನ ನೀಡುವುದಾಗಿ ಬಿಜೆಪಿ ನಾಯರ ಗುಂಪು ನನ್ನನ್ನು ಭೇಟಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ಚಿಂತನೆ ನಡೆಸಿದ್ದಾನೆ. ದೆಹಲಿಗೆ ಬಂದು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ತಿಳಿಸಿದ್ದರು. ಆದರೆ, ನಾನು ಹುಬ್ಬಳ್ಳಿಯಲ್ಲಿ ಸಣ್ಣ ಕಾರ್ಯಕ್ರಮದೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳುತ್ತೇನೆಂದು ಮನವಿ ಮಾಡಿಕೊಂಡಿದ್ದಾರೆ. ಕೆಲವು ವಿಷಯಗಳಲ್ಲಿ ನನ್ನ ಮುಕ್ತತೆ ಮತ್ತು ತಾತ್ವಿಕ ನಿಲುವಿನಿಂದಾಗಿ ಇನ್ನೊಂದು ಪಕ್ಷಕ್ಕೆ ಹೊಂದಿಕೊಳ್ಳುವುದು ನನಗೆ ಸುಲಭವಲ್ಲ. ಆದರೆ, ಕಾಲದ ಮದ್ದನ್ನು ಒಪ್ಪಿಕೊಳ್ಳಬೇಕಿದೆ. ಬಿಜೆಪಿಯ ರಾಜಕೀಯ ಬೇರೆ ಪಕ್ಷಗಳಿಗಿಂತ ಭಿನ್ನ ಎಂಬುದನ್ನು ಒಪ್ಪಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
ಇದೇ ವೇಳೆ 2014ರಲ್ಲಿ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸೋಲಿನ ನಂತರ ರಾಜಕೀಯದಿಂದ ದೂರ ಉಳಿದಿರುವ ಪುತ್ರ ವಸಂತ್ಗೆ ವೃತ್ತಿಜೀವನವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ ಎಂಬುದನ್ನು ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ನಾಯಕರಿಂದಲೂ ಹೊರಟ್ಟಿ ದೂರ ಉಳಿದಿಲ್ಲ. ಹೆಚ್.ಡಿ.ದೇವೇಗೌಡ ಅವರಿಗೆ 13 ಪುಟಗಳ ಪತ್ರವನ್ನು ಬರೆದಿದ್ದು, ಇದಕ್ಕೆ ಪಕ್ಷದಿಂದ ಯಾವುದೇ ಪ್ರತಿಕ್ರಿಯೆಗಳೂ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿ ಅವರಿಂದ ಒಪ್ಪಿಗೆ ಸಿಕ್ಕಿದ್ದು, ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದಾರೆನ್ನಲಾಗುತ್ತಿದೆ.
1980 ರ ಚುನಾವಣೆಯಲ್ಲಿ ಹೊರಟ್ಟಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 1983ರಿಂದ ಜನತಾ ಪರಿವಾರದೊಂದಿಗೆ ಅಪ್ತತೆಯನ್ನು ಬೆಳೆಸಿಕೊಂಡ ಅವರು, ಸತತ ಏಳು ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಗೆದ್ದಿದ್ದರು. ಅವರ ರಾಜಕೀಯ ನಿಲುವು ಚುನಾವಣೆ ಗೆಲ್ಲಲು ಅವರಿಗೆ ಯಾವುದೇ ಪಕ್ಷ ಸೇರ್ಪಡೆ ಅಗತ್ಯವಿಲ್ಲ ಎಂಬುದನ್ನು ಖಚಿತಪಡಿಸಿತ್ತು. ತಮ್ಮ ಮತದಾರರೊಂದಿಗೆ (ಶಿಕ್ಷಕರು) ಹೊರಟ್ಟಿ ನಿರಂತರ ಸಂಪರ್ಕದಲ್ಲಿದ್ದು, ಈ ಬಾರಿ ಮತದಾರರ ಪ್ರತಿಕ್ರಿಯೆ ಹೊರಟ್ಟಿಯವರಲ್ಲಿ ಕೆಲ ಆತಂಕವನ್ನು ಸೃಷ್ಟಿಸಿದೆ.
ತಾತ್ವಿಕ ರಾಜಕಾರಣಿ ಎಂದು ಪರಿಗಣಿಸಲ್ಪಟ್ಟ ಹೊರಟ್ಟಿ, ರಾಜ್ಯ ಬಿಜೆಪಿ ನಾಯಕರ ಗುಂಪು ಅವರನ್ನು ಬಿಜೆಪಿಗೆ ಸೇರುವಂತೆ ಮನವೊಲಿಸಲು ಭೇಟಿಯಾಗಿ “ಗೌರವಾನ್ವಿತ ಸ್ಥಾನ” ದ ಭರವಸೆ ನೀಡಿದರು. ಅವರನ್ನು ಹೊಸದಿಲ್ಲಿಯಲ್ಲಿ ಸೇರಲು ತಿಳಿಸಲಾಯಿತು, ಆದರೆ ಅವರು ಹುಬ್ಬಳ್ಳಿಯಲ್ಲಿ ಸರಳ ಕಾರ್ಯಕ್ರಮಕ್ಕೆ ವಿನಂತಿಸಿದರು. ‘ಕೆಲವು ವಿಷಯಗಳಲ್ಲಿ ನನ್ನ ಮುಕ್ತತೆ ಮತ್ತು ತಾತ್ವಿಕ ನಿಲುವಿನಿಂದಾಗಿ ಇನ್ನೊಂದು ಪಕ್ಷಕ್ಕೆ ಹೊಂದಿಕೊಳ್ಳುವುದು ನನಗೆ ಸುಲಭವಲ್ಲ. ಆದರೆ ಕಾಲವೇ ವಾಸಿ’ ಎಂದ ಅವರು, ಬಿಜೆಪಿಯ ರಾಜಕೀಯ ಬೇರೆ ಪಕ್ಷಗಳಿಗಿಂತ ಭಿನ್ನ ಎಂಬುದನ್ನು ಒಪ್ಪಿಕೊಂಡರು.