ಬಾಗಲಕೋಟೆ: ಕಾಲೇಜು ಪ್ರಾಂಶುಪಾಲರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ಸಮೀಪದ ಹುನಗುಂದ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮೃತ ಪ್ರಾಂಶುಪಾಲರನ್ನು ನಾಗರಾಜ್ ಮುದ್ಗಲ್ (50) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಈಗ ಮೃತರು ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಲಾಗುವ ಜಾನಪದ ಸಂಸ್ಕೃತಿ ಕಾರ್ಯಕ್ರಮದ ಸಿದ್ಧತೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರು.
ತಡರಾತ್ರಿಯವರೆಗೆ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿ ಮುದ್ಗಲ್ ಕಾಲೇಜಿನಿಂದ ರಾತ್ರಿ 1 ಗಂಟೆ ನಂತರ ಮನೆಗೆ ತೆರಳಿದರು. ನಂತರ ಅವರು ಮತ್ತೆ ಮುಂಜಾನೆ ಬೇಗೆನೆ ಮನೆಯಿಂದ ಹೊರಟು ಬಂದಿದ್ದರು.
ನಂತರ ಅವರು ಮೆಟ್ಟಿಲುಗಳ ಗ್ರಿಲ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುಟುಂಬದ ಪ್ರಕಾರ, ಅವರು ಕಾಲೇಜಿನಲ್ಲಿನ ಒತ್ತಡದ ಬಗ್ಗೆ ಪ್ರಸ್ತಾಪಿಸಿದ್ದರು ಆದರೆ ಎಂದಿಗೂ ವಿವರಿಸಲಿಲ್ಲ.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.