ಬಾಗಲಕೋಟೆ : ಕೃಷ್ಣಾ ನದಿಯ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ನಿತ್ಯವು ಮೀನುಗಾರಿಕೆ ನಡೆಯುತ್ತದೆ. ಬರೋಬ್ಬರಿ 17 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಮಂಗಳವಾರ ಸಿಕ್ಕಿದೆ.
ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಸೇತುವೆ ಸಮೀಪ ಸಿಕ್ಕಿದೆ. ಸಮುದ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೀನು ಪತ್ತೆಯಾಗುತ್ತದೆ. ಈ ಸಾರಿ ಬೃಹತ್ ಪ್ರಮಾಣದಲ್ಲಿ ನದಿಗೆ ನೀರು ಹರಿದು ಬಂದಿದೆ. ಹೊಸ ಮೀನುಗಳು ಪ್ರಮಾಣದಲ್ಲಿ ಸಿಗುತ್ತಿದೆ. ಹೀಗಾಗಿ ಮೀನುಗಾರರು ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ.
ಪ್ರತಿನಿತ್ಯದಂತೆ ಕೊರ್ತಿ ಗ್ರಾಮದ ಮೀನುಗಾರಾದ ರಮೇಶ ಮಡ್ಡಿಮಣಿ, ಸಾಬು ಮಡ್ಡಿಮಣಿ ಎನ್ನುವ ತಂದೆ, ಮಗ ಮೀನುಗಾರಿಗೆ ವೃತ್ತಿ ಮಾಡುತ್ತಾರೆ. ಮಂಗಳವಾರ ಕೂಡಾ ನದಿಯಲ್ಲಿ ಮೀನು ಹಿಡಿಯಲು ಬಲೆ ಬಿಸಿದ್ದರು. ತಂದೆ -ಮಗ ಇಬ್ಬರೂ ಸೇರಿ ಎಂದಿನOತೆ ಮೀನು ಹಿಡಿಯಲು ಕೃಷ್ಣಾನದಿಗೆ ಇಳಿದಿದ್ದರು. ಬೆಳಿಗ್ಗೆ ಹಾಕಿದ್ದ ಬಲೆಯನ್ನು ಚೆಕ್ ಮಾಡುವ ವೇಳೆ ಮೀನು ಪತ್ತೆಯಾಗಿದೆ. ಬಲೆ ಕಿತ್ತುಕೊಂಡು ಹೋಗೋದಕ್ಕೆ ಮೀನು ಪ್ರಯತ್ನ ಮಾಡಿದೆ. ಆದರೇ ಸಾಧ್ಯವಾಗಿಲ್ಲ. ಬಲೆ ಕೂಡ ಹರಿದಿದೆ. ಆದರೂ ಕೂಡಾ ಮೀನನ್ನು ಹಿಡಿಯುವಲ್ಲಿ ಇಬ್ಬರು ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಸಂಚರಿಸುವ ನಗರ ಸಾರಿಗೆಯ ಎಲ್ಲ ಬಸ್ಗಳು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ವೃತ್ತದ ಮೂಲಕ ಹಾದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು…
ರಾಜ್ಯ ಬಿಜೆಪಿ ಉಪಾಧ್ಯಕ್ಷ, ನಟಿ, ಮಾಳವಿಕಾ ಅವಿನಾಶ್ ಅವರ ತಂದೆ ನಟೇಶನ್ ಗಣೇಶನ್ ಅವರು ನಿಧನರಾಗಿದ್ದಾರೆ.
ಪುಣೆಯಲ್ಲಿ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನನಾಂಗವನ್ನು ಕಬ್ಬಿಣದ ಮೊಳೆಗಳಿಂದ ವಿರೂಪಗೊಳಿಸಿದ್ದಾನೆ ಮತ್ತು ಆಕೆಯ ಮೇಲೆ ಸಂದೇಹ ವ್ಯಕ್ತಪಡಿಸಿದ…
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ.
ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…
ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…