ಬಾಗಲಕೋಟೆ: ಬೀಳಗಿ ತಾಲೂಕಿನ ಬಾಡಗಂಡಿ ಬಳಿ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯಲ್ಲಿ ಕ್ಯಾಂಟರ್ ಪಂಚರ್ ತಿದ್ದಿಸಲು ನಿಂತ ಪ್ರಯಾಣಿಕರ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಮೃತರಲ್ಲಿ ರಜಾಕ್ ಹಾಗೂ ರಾಮಸ್ವಾಮಿ ಎಂಬುವವರು ಬೀಳಗಿ ತಾಲೂಕಿನ ಗೋವಿನದಿನ್ನಿ ಗ್ರಾಮದವರಾಗಿದ್ದು, ನಾಶಿರ್ ಮುಲ್ಲಾ, ಮಲ್ಲಪ್ಪ ಮಳಲಿ ಬೀಳಗಿ ಪಟ್ಟಣದವರಾಗಿದ್ದು ಸರಿಸುಮಾರು 38-40 ಆಸುಪಾಸಿನ ವಯೋಮಾನದವರು.
ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.