ಚಿಕ್ಕಮಗಳೂರು: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆಯು ನಡೆದಿದೆ.
ಜಿಲ್ಲೆಯ ಎನ್ ಆರ್ ಪುರದದ 12 ಹರೆಯದ ಬಾಲಕ ಮೃತಪಟ್ಟವನು. ಬಾಲಕ ಸೈಕಲ್ ಓಡಿಸುತ್ತಿದ್ದ ವೇಳೆ ಈ ಘಟನೆಯು ನಡೆದಿದೆ. ಮೆಸ್ಕಾಂ ಕಚೇರಿ ಬಳಿಯಲ್ಲಿ ಸೈಕಲ್ ನಿಂದ ಬಾಲಕನು ಕುಸಿದು ಬಿದ್ದಿದ್ದಾನೆ. ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಆತ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಬಿಸಿಲಿನಾಘಾತದಿಂದಾಗಿ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂದು ವೈದ್ಯರು ಸಂಶಯಿಸಿದ್ದಾರೆ.