News Karnataka Kannada
Thursday, May 02 2024
ಕರ್ನಾಟಕ

ಸಾಲದ ಆಸೆಗೆ 24 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Photo Credit :

ಸಾಲದ ಆಸೆಗೆ 24 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಕಾರವಾರ:ವ್ಯವಹಾರ ಆರಂಭಿಸಲು 60 ಲಕ್ಷ ರೂ. ಸಾಲ ಲಭಿಸುತ್ತದೆ ಎಂದುಕೊಂಡಿದ್ದ  ವ್ಯಕ್ತಿಯೊಬ್ಬ 24 ರೂ. ಲಕ್ಷ ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಂಭವಿಸಿದೆ.

 ಯಲ್ಲಾಪುರ ತಾಲೂಕಿನಹಿಟ್ಟಳ್ಳಿಯ ವಿಘ್ನೇಶ್ವರ ಹೆಗಡೆ ಎಂಬುವವರು ಆನ್ಲೈನ್ ಮಾರ್ಕೆಟಿಂಗ್ ಸಂಸ್ಥೆ ಆರಂಭಿಸಲು ಹಣಕಾಸಿನ ನೆರವಿಗೆ ಹುಡುಕಾಡುತ್ತಿದ್ದರು. ಈ ಸಂಬಂಧ ಇಂಟರ್ನೆಟ್ನಲ್ಲಿ ಹುಡುಕಾಡಿದಾಗ  www.capitalmorganfinancial.com ಎಂಬ ವೆಬ್ಸೈಟ್ ವಿಳಾಸ ಕಾಣಿಸಿತು.

ಅದರಲ್ಲಿದ್ದ ಡೇವಿಡ್ ಪ್ಯಾಟ್ರಿಕ್ ಎಂಬಾತನ ಮೊಬೈಲ್ ಸಂಖ್ಯೆಯಿತ್ತು. ಆತನಿಗೆ ಕರೆ ಮಾಡಿದಾಗ, ತನ್ನನ್ನು ಕಂಪನಿಯ ನಿರ್ದೇಶಕ ಎಂದು ಪರಿಚಯಿಸಿಕೊಂಡ. ತಮಗೆ ಹಣಕಾಸಿನ ಅವಶ್ಯಕತೆ ಇರುವ ಬಗ್ಗೆ ವಿಘ್ನೇಶ್ವರ ಹೆಗಡೆ ಆತನ ಬಳಿ ನಿವೇದಿಸಿಕೊಡರು.

ಡೇವಿಡ್ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯು ಅಮೆರಿಕ ಮೂಲದ್ದಾಗಿದೆ. 60 ಲಕ್ಷ ರೂ. ಸಾಲ ಕೊಡಿಸಲು ಸಾಧ್ಯವಿದೆ. ಹಣ ವರ್ಗಾವಣೆ ಮಾಡುವ ವಿವಿಧ ಪ್ರಕ್ರಿಯೆಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಕತೆ ಕಟ್ಟಿದ್ದ. ಆ ಶುಲ್ಕ ಈ ಶುಲ್ಕ ಎಂದು ನಂಬಿಸಿ  ನಮ್ಮ ದೇಶದ ವಿವಿಧೆಡೆ ಇರುವ ಬ್ಯಾಂಕ್ ಖಾತೆಗಳಿಗೆ ಒಟ್ಟು 24 ಲಕ್ಷ ರೂ. ಜಮಾ ಮಾಡಿಸಿಕೊಂಡ. ಆದರೆ, ಸಾಲ ಕೊಡಲಿಲ್ಲ, ಜಮೆ ಮಾಡಿಸಿಕೊಂಡ ಹಣವನ್ನೂ ಮರಳಿಸಿಲ್ಲ. ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಕಾರವಾರದ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು